ಕಠ್ಮಂಡು : ನೇಪಾಳದ ಕಾಂಚನಜುಂಗಾ ಪರ್ವತವನ್ನು ಏರುವ ವೇಳೆ ಭಾರತೀಯ ಪರ್ವತಾರೋಹಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ವಂದಿದೆ.
ಮಹಾರಾಷ್ಟ್ರದ ನಾರಾಯಣನ್ ಅಯ್ಯರ್ ಅವರು ಗುರುವಾರ ವಿಶ್ವದ ಮೂರನೇ ಅತಿ ಎತ್ತರದ ಶಿಖರದ ಶಿಖರದ ತುದಿಗೆ ತೆರಳುತ್ತಿದ್ದಾಗ 8,200 ಮೀಟರ್ ಎತ್ತರದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪಯೋನೀರ್ ಅಡ್ವೆಂಚರ್ನ ಅಧ್ಯಕ್ಷ ಪಸಾಂಗ್ ಶೆರ್ಪಾ ಉಲ್ಲೇಖಿಸಿದ್ದಾರೆ ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.
52 ವರ್ಷದ ಆರೋಹಿ ಆರೋಹಣವನ್ನು ಕೊನೆಗೊಳಿಸುವಾಗ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಆದರೆ, ಇಳಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
Advertisement. Scroll to continue reading.

ಅಯ್ಯರ್ ಅವರ ಕ್ಲೈಂಬಿಂಗ್ ಗೈಡ್ ಅವರನ್ನು ಕೆಳಗಿಳಿಯುವಂತೆ ಪದೇ ಪದೇ ಕೇಳಿದ್ದರು. ಆದರೆ, ಅವರು ನಿರಾಕರಿಸಿದರು ಎನ್ನಲಾಗಿದೆ.