Connect with us

Hi, what are you looking for?

Diksoochi News

ರಾಜ್ಯ

ಬ್ರಹ್ಮಾವರ : ಪೇಜಾವರ ಶ್ರೀ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕರ್ನಾಟಕ ಅರಣ್ಯ ಇಲಾಖೆ ಮತ್ತು ಶ್ರೀ ಪೇಜಾವರ ಮಠ ನೀಲಾವರ ಗೋಶಾಲೆ ಬಳಿ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಗೌರವಾರ್ಥ ಸ್ಮೃತಿ ವನ ನಿರ್ಮಾಣ ಕಾರ್ಯಕ್ಕೆ ಶನಿವಾರ ಬೆಳಿಗ್ಗೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದರು ಮತ್ತು ಅರಣ್ಯ ಸಚಿವ ಉಮೇಶ ಕತ್ತಿಯವರು ಶಂಕುಸ್ಥಾಪನೆ ಮಾಡಿದರು.


ಬಳಿಕ ಇಲ್ಲಿನ ಪರಿಸರದಲ್ಲಿ ಹಲವಾರು ಗಿಡಗಳನ್ನು ಸಚಿವರು ನಾಟಿ ಮಾಡಿದರು. ನೀಲಾವರ ಗೋಶಾಲೆಯಲ್ಲಿರು ಅನೇಕ ಅನಾಥ ಗೋವುಗಳನ್ನು ವೀಕ್ಷಿಸಿದರು. ಬಳಿಕ ಗೋಪೂಜೆ ನೆರವೇರಿಸಿದರು.

Advertisement. Scroll to continue reading.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಪೇಜಾವರ ಶ್ರೀಗಳ ಹೆಸರು ಶಾಶ್ವತವಾಗಿಸುವ ಕಾರ್ಯ ಶ್ಲಾಘನೀಯ ಅವರು ನಡೆದಾಡುವ ದೇವರು ಎನ್ನುವ ಭಾವನೆ ಜನರಲ್ಲಿದೆ ಗೋಶಾಲೆಯ ಬಳಿಯೆ ಅವರ ಸ್ಮರಣಾರ್ಥ ಮಾಡಲಾದ ಕಾರ್ಯ ಶ್ಲಾಗನೀಯ ಎಂದರು.
ಇದೇ ಸಂದರ್ಬದಲ್ಲಿ ಹಲವಾರು ವರ್ಷದಿಂದ ಕರಾವಳಿ ಜಿಲ್ಲೆಯಲ್ಲಿನ ಡೀಮ್ಡ್ ಫಾರೇಸ್ಟ ಸಮಸ್ಯೆ ಮುಕ್ತಾಯವಾಗಿದೆ ಇದರಿಂದ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಜನರಿಗೆ ಉಪಯುಕ್ತವಾಗಿದೆ ಎಂದರು.


ಗೋಶಾಲೆ ವತಿಯಿಂದ ಮತ್ತು ಡೀಮ್ಡ್ ಫಾರೇಸ್ಟ ಸಮಸ್ಯೆಯಿಂದ ಮುಕ್ತಿ ಕಂಡ ಗ್ರಾಮದ ಜನರಿಂದ ಸಚಿವರನ್ನು ಸನ್ಮಾನಿಸಲಾಯಿತು.


ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಉಡುಪಿ ಶಾಸಕ ಕೆ ರಘುಪತಿ ಭಟ್, ಸಂಸದೆ ಶೊಭಾ ಕರಂದ್ಲಾಜೆ .ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಅರಣ್ಯ ಇಲಾಖೆಯ ಪ್ರಕಾಶ್ ಎಸ್ ನೆಟಾಲ್ಕರ್, ಮಟ್ಟಾರು ರತ್ನಾಕರ ಹೆಗಡೆ, ಬ್ರಹ್ಮಾವರ ತಾಲೂಕು ತಹಶಿಲ್ದಾರ್ ರಾಜ ಶೇಖರ ಮೂರ್ತಿ , ಕ್ಲಿಫರ್ಡ ಲೋಬೋ , ಸುಬ್ರಹ್ಮಣ್ಯ ಆಚಾರ್ಯ , ನೀಲಾವರ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಂದ್ರ ನೀಲಾವರ ಇನ್ನಿತರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!