Connect with us

Hi, what are you looking for?

Diksoochi News

ಕರಾವಳಿ

ಪರ್ಕಳದಲ್ಲಿ ಮತ್ತೊಂದು ಸುರಂಗ ಪತ್ತೆ!

2

ಪರ್ಕಳ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಳಪರ್ಕಳದಲ್ಲಿ ನಡೆಯುತ್ತಿರುವಾಗ ಸುರಂಗದಂತೆ ಕಂಡುಬಂದ ಪ್ರದೇಶದ ಅನತಿ ದೂರದಲ್ಲಿರುವ ರಸ್ತೆಯ ಇನ್ನೊಂದು ಮಗ್ಗುಲಲ್ಲಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಹಿಂಬದಿಯ ಹಾಡಿಯಲ್ಲಿ ಮಹೇಶ್ ಕುಲಾಲ್ ಅವರ ಕುಟುಂಬಕ್ಕೆ ಸೇರಿದಜಾಗದಲ್ಲಿ ಸುರಂಗವೊಂದು ಇರುವುದು ಕಂಡುಬಂದಿದೆ.

ಛಾಯಾಗ್ರಹಕ ಮಹೇಶ್ ಕುಲಾಲ್ ಅವರು ಹೇಳುವ ಪ್ರಕಾರ, ನಾವು ಚಿಕ್ಕವರಿದ್ದಾಗ ಸುಮಾರು ದೂರದವರೆಗೆ ಈ ಸುರಂಗದಲ್ಲಿ ಒಳಗೆ ಹೋಗಿ ಆಟವಾಡಿ ಬರುತ್ತಿದ್ದೆವು. ಕ್ರಮೇಣ ಕಾಲಕಳೆದಂತೆ ಗುಡ್ಡೆಯ ಮಣ್ಣು ಕುಸಿದಿದೆ. ನಂತರದ ದಿನಗಳಲ್ಲಿ ಇದರ ದಾರಿ ಕಿರಿದಾದದಂತಾಗಿದೆ. ಕಾಡು ಇರುವ ಪ್ರದೇಶ ವಾಗಿದೆ ಒಟ್ಟಿನಲ್ಲಿ ಪರ್ಕಳದ ಸುತ್ತಮುತ್ತ ನೂರೊಂದು ಬಾವಿ ಇರುವ ಪ್ರದೇಶ ಹಾಗೂ ಸುರಂಗದಂತೆ ಕಂಡುಬಂದಿರುವ ಪ್ರದೇಶ ಇರುವುದು ಕಂಡುಬಂದಿರುವುದು. ಅಧ್ಯಯನ ನಡೆಸುವ ಸಂಶೋಧಕರಿಗೆ ಪೂರಕವಾದ ಸ್ಥಳವಾಗಿ ಪರ್ಕಳ ಮತ್ತು ಕೆಳಪರ್ಕಳ ಸೂಕ್ತ ಪ್ರದೇಶ ಆಗಿದೆ.


ಪೊರ್ರ್ಕಳ ಅಂದರೆ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯಲ್ಲಿ ಯುದ್ದ ಭೂಮಿಯಂತೆ.. ಹಾಗಾಗಿ ನಂತರ ಇದು ಪರ್ಕಳವಾಗಿ ಹೆಸರು ಮಾರ್ಪಾಡಾಗಿರಬಹುದೇ?
ಇದರ ಛಾಯಾಚಿತ್ರ ಮತ್ತು ವಿಡಿಯೋ ಸಂಶೋಧಕರಿಗೆ ಕಳುಹಿಸಿದ್ದೇನೆ, ಸ್ಥಳಕ್ಕೆ ಭೇಟಿ ನೀಡಿದ ನಂತರ ಇದರ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಬಹುದು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.


ಭೌಗೋಳಿಕವಾಗಿ ಈ ಕೆಳಪರ್ಕಳದಲ್ಲಿ ಯಥೇಚ್ಛವಾಗಿ ಕಡು ಬೇಸಿಗೆಯಲ್ಲಿ ತೋಡಿನಲ್ಲಿನೀರು ಹರಿಯವುದು ಸುರಂಗದಂತೆ ಕಂಡುಬರುವ ಈ ಪ್ರದೇಶ 101 ಬಾವಿ ಇದೆ. ಐತಿಹ್ಯ ಇರುವ ಪ್ರದೇಶ ಕಾಣಸಿಕ್ಕಿರುವುದು ಹಾಗೂ ಎಲ್ಲ ವಿಷಯದಲ್ಲಿಯೂ ಕೌತುಕಕ್ಕೆ ಈಪ್ರದೇಶ ಕಾರಣವಾಗಿದೆ. ಸ್ಥಳೀಯರಾದ, ಮಹೇಶ್ ಕುಲಾಲ್ ಹಾಗೂ
ಅಪ್ರಾಯ್ ನಾಯ್ಕ್ ಪರ್ಕಳ ಜೊತೆಗಿದ್ದು ಸಹಕರಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!