ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ವಿದ್ಯಾರ್ಥಿಗಳ ಶಾಲಾ ರಜೆಯನ್ನು ಪಠ್ಯೇತರ ಚಟುವಟಿಕೆ ಮತ್ತು ಸಾಮಾನ್ಯ ಜ್ಞಾನ ವೃದ್ಧಿಗೆ ಪ್ರಥಮ ಬಾರಿಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಥಿಗಳಿಗೆ ಪೂರಕವಾಗುವ ‘ನಮ್ಮಗ್ರಂಥಾಲಯ’ ಎನ್ನುವ ಕಾರ್ಯಕ್ರಮ ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಪಂಚಾಯತಿಯಲ್ಲಿ ಆರಂಭಿಸಿದ್ದು, ನಾನಾ ಸ್ಪರ್ಧೆಯನ್ನು ಮಾಡಲಾಗಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ ಶುಕ್ರವಾರ ಉನ್ನತಿ ಸಭಾಂಗಣದಲ್ಲಿ ಜರುಗಿತು.
ಗ್ರಂಥಾಲಯ ಪಿತಾಮಹ ಎಸ್. ಆರ್. ರಂಗನಾಥ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಬಹುಮಾನ ವಿತರಿಸಿದ ವಾರಂಬಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ವಾಚನಾಲಯದಲ್ಲಿ ಸಿಗುವ ಪುಸ್ತಕದ ಸಾಮಾನ್ಯ ಜ್ಞಾನದ ಓದಿನಿಂದ ಜ್ಞಾನ ಪೀಠ ಪ್ರಶಸ್ತಿ ಪಡೆದ ಜ್ಞಾನವಂತರಾದವರು ಅನೇಕರಿದ್ದಾರೆ. ರಜಾ ದಿನದ ಸದುಪಯೋಗ ಪಡೆದು ದೇಶಕ್ಕೆ ಆಸ್ತಿ ಯಾಗಿ ಎಂದರು.
80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಾಬು , ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲಾಬಿ , ಉಪಾಧ್ಯಕ್ಷ ಸದಾನಂದ ,ಕಾರ್ಯದರ್ಶಿ ಶೇಖರ ನಾಯ್ಕ್ , ಅಭಿವೃದ್ಧಿ ಅಧಿಕಾರಿ ಫರ್ಜಾನಾ , ಗ್ರಂಥ ಪಾಲಕಿ ಬೇಬಿ ಉಪಸ್ಥಿತರಿದ್ದರು.
