ಬ್ರಹ್ಮಾವರ: ಹೇರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರ ಬಳಿ ಚಿರತೆ ಸೆರೆಯಾಗಿದೆ.
ಸುರೇಶ್ ತಿಂಗಳಾಯ ಅವರ ಮನೆಯ ಪಕ್ಕದಲ್ಲಿ ರಾತ್ರಿ ಸುಮಾರು 10 ಗಂಟೆಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. 2-3 ವರ್ಷ ಪ್ರಾಯದ ಚಿರತೆ ಇದಾಗಿದೆ.
ಗ್ರಾಮ ಪಂಚಾಯತ್ ಸದಸ್ಯ ಉದಯ ಕಾಮತ್ ಅವರು ಹಾಗೂ ಸಾರ್ವಜನಿಕರ ಸಹಕಾರದಿಂದ ಉಡುಪಿ ವಲಯಾಧಿಕಾರಿ ಸುಬ್ರಮಣ್ಯ ಆಚಾರ್ ಮಾರ್ಗದರ್ಶನದಲ್ಲಿ ಬ್ರಹ್ಮವಾರ ಶಾಖೆಯ ಉಪ ವಲಯ ಅಧಿಕಾರಿ ಹರೀಶ್ ಕೆ. ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ಪಾಲ್ಗೊಂಡಿದ್ದರು.