ವಾರಣಾಸಿ: ಕಾಶಿ ವಿಶ್ವನಾಥ ದೇವಾಲಯ-ಜ್ಞಾನವಾಪಿ ಮಸೀದಿ ಪ್ರಕರಣ ಸಂಬಂಧ ವಾದ-ಪ್ರತಿವಾದಗಳ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ಪೂರ್ಣಗೊಳಿಸಿದೆ. ಅಲ್ಲದೇ ನಾಳೆಗೆ ತೀರ್ಪನ್ನು ಕಾಯ್ದಿರಿಸಿದೆ.
ವಿಶೇಷ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಸಿವಿಲ್ ದಾವೆಯ ವಿಚಾರಣೆ ನಡೆಸುತ್ತಿದ್ದರು.
ಶಿವಲಿಂದ ಪೂಜೆ ಮಾಡಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ನಾಳೆ ಆದೇಶ ನೀಡಲಾಗುತ್ತದೆ. ಮುಂದಿನ ವಿಚಾರಣೆ ಬಗ್ಗೆ ನಾಳೆ ಆದೇಶ ಹೊರಬೀಳಲಿದೆ.
Advertisement. Scroll to continue reading.

ಜ್ಞಾನ್ವಾಪಿ ಮಸೀದಿ ಸಮೀಕ್ಷೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು.
ವಿಚಾರಣೆಯ ವೇಳೆ 19 ವಕೀಲರು ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ಕೇವಲ 23 ಜನರಿಗೆ ಮಾತ್ರ ನ್ಯಾಯಾಲಯದ ಒಳಗೆ ಅನುಮತಿಸಲಾಗಿತ್ತು.
Advertisement. Scroll to continue reading.

In this article:Diksoochi news, diksoochi Tv, diksoochi udupi, Gyanvapi Mosque case, Kashi Vishwanath temple, Varanasi district court

Click to comment