Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ದಿ.ಲಕ್ಷ್ಮೀ ರಾಜೇಶ್ ಶೆಟ್ಟಿ ಮಂದಾರ್ತಿ ಸ್ಮರಣಾರ್ಥ ಬಸ್ ನಿಲ್ದಾಣ ಉದ್ಘಾಟನೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸರ್ವೀಸ್ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಬ್ರಹ್ಮಾವರ ಠಾಣಾಧಿಕಾರಿ ಹಲವಾರು ಮಾರ್ಪಾಡು ಮಾಡಿ ಸಫಲವಾದಂತೆ ಅದಕ್ಕೆ ಅನುಕೂಲವಾಗುವಂತೆ ಆಕಾಶವಾಣಿ ವೃತ್ತದ ಬಳಿ ಬಸ್ ತಂಗುದಾಣವೊಂದನ್ನು ಕಳೆದ ವರ್ಷ ಮೃತರಾದ ರಾಜೇಶ್ ಶೆಟ್ಟಿ ಮಂದಾರ್ತಿ ಅವರ ನೆನಪಿನಲ್ಲಿ ಅವರ ಕುಟುಂಬಿಕರಾದ ಶ್ರೀ ಲಕ್ಷ್ಮೀ ಸಂಸ್ಥೆಯವರು ಕೊಡುಗೆಯಾಗಿ ನೀಡಿದ್ದಾರೆ.


ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ ನಿಲ್ದಾಣವನ್ನು ಶುಕ್ರವಾರ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಇಲ್ಲಿನ ಸಂಚಾರ ಸುವ್ಯವಸ್ಥೆಗೆ ಇಲ್ಲಿ ನೀಡಲಾದ ಬಸ್ ನಿಲ್ದಾಣ ಅತೀ ಪೂರಕವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಮಾತ್ರ ಕೆಲವೊಂದು ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.


ಮೃತರ ತಂದೆ ತಾಯಿಯರಾದ ವಿಠಲ್ ಶೆಟ್ಟಿ , ರುದ್ರಮ್ಮ ಶೆಟ್ಟಿ, ಪತ್ನಿ ಶಲಿತಾ, ಮಗ ಸಮರ್ಥ, ಸಹೋದರರಾದ ಗಣೇಶ್ ಶೆಟ್ಟಿ , ಸುರೇಶ ಶೆಟ್ಟಿ, ಮಹೇಶ್ ಶೆಟ್ಟಿ , ಸತೀಶ್ ಶೆಟ್ಟಿ ,ದೇವದಾಸ್ ಶೆಟ್ಟಿ ಹಾಜರಿದ್ದರು.


ಗಣ್ಯರಾದ ಭುಜಂಗ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ , ಆರೂರು ತಿಮ್ಮಪ್ಪ ಶೆಟ್ಟಿ , ಪ್ರಥ್ವಿರಾಜ್ ಶೆಟ್ಟಿ , ರೋಟರಿ ಹರೀಶ್ ಕುಂದರ್ ಮತ್ತು ಸ್ಥಳಿಯ ಅಟೋ ಚಾಲಕರು, ಮಾಲಕರು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!