ತಿರುಪತಿ: ತಿರುಪತಿಯ ಪುಣ್ಯಕ್ಷೇತ್ರ ವೆಂಕಟೇಶ್ವರನ ದರ್ಶನಕ್ಕೆ ಹೊರಟಿದ್ದ ಕರ್ನಾಟಕದ ಭಕ್ತರೊಬ್ಬರ ಕಾರು ಭಸ್ಮಗೊಂಡ ಘಟನೆ ನಡೆದಿದೆ.
ತಿರುಪತಿ ಜಿಲ್ಲೆಯ ತಿರುಮಲ ಶಂಖುಮಿಟ್ಟಾ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿದೆ.
ಘಟನೆ ನಡೆಯುತ್ತಿದ್ದಂತರ ಕಾರಿನಲ್ಲಿದ್ದ ಎಲ್ಲರೂ ಇಳಿದು ಜೀವ ಉಳಿಸಿಕೊಂಡಿದ್ದಾರೆ. ತಕ್ಷಣ ತಿರುಪತಿ ತಿರುಮಲ ದೇವಸ್ಥಾನ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ, ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Advertisement. Scroll to continue reading.