ದೆಹಲಿ : ಜನವರಿ 1, 2023 ರಿಂದ ಇಡೀ ದೆಹಲಿ – ಎನ್ ಸಿ ಆರ್ ಪ್ರದೇಶದಲ್ಲಿ ಕೈಗಾರಿಕಾ, ದೇಶೀಯ ಮತ್ತು ಇತರ ವಿವಿಧ ಅಪ್ಲಿಕೇಶನ್ ಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಷೇಧಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ನಿರ್ದೇಶನಗಳನ್ನು ನೀಡಿದೆ.
ಆದರೆ, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಕಡಿಮೆ-ಗಂಧಕದ ಕಲ್ಲಿದ್ದಲಿನ ಬಳಕೆಯನ್ನು ನಿಷೇಧದಿಂದ ವಿನಾಯಿತಿ ನೀಡಿದೆ.
ಜೂನ್ 3 ರಂದು ಹೊರಡಿಸಿದ ಆದೇಶದಲ್ಲಿ, ಪಿ ಎನ್ ಜಿ ಮೂಲಸೌಕರ್ಯ ಮತ್ತು ಪೂರೈಕೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಅಕ್ಟೋಬರ್ 1 ರಿಂದ ಮತ್ತು ಪಿ ಎನ್ ಜಿ ಪೂರೈಕೆ ಇನ್ನೂ ಲಭ್ಯವಿಲ್ಲದ ಪ್ರದೇಶಗಳಲ್ಲಿ 2023 ರ ಜನವರಿ 1 ರಿಂದ ಕಲ್ಲಿದ್ದಲು ಬಳಕೆಯ ಮೇಲಿನ ನಿಷೇಧ ಜಾರಿಗೆ ಬರಲಿದೆ ಎಂದು ಸಿಎಕ್ಯೂಎಂ ತಿಳಿಸಿದೆ.
Advertisement. Scroll to continue reading.