ಬೆಂಗಳೂರು : ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಸಹೋದರ, ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದೆ. ಅಲ್ಲದೇ, ಈ ಬಗ್ಗೆ ಜಯ ಕರ್ನಾಟಕ ಸಂಘಟನೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದೆ.
ಜಯ ಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿದವರಲ್ಲಿ ಮನ್ಮಿತ್ ರೈ ಹೆಸರು ಕೇಳಿ ಬಂದಿದೆ. ಮನ್ಮಿತ್ ರೈ ಮಾತ್ರ ‘ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ಎಷ್ಟು ಸತ್ಯ ಎಂಬುವುದನ್ನ ಪೊಲೀಸರು ತನಿಖೆ ಮಾಡುತ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ’ ಎಂದಿದ್ದಾರೆ.
ಅಂದ್ಹಾಗೆ, ದಿವಂಗತ ಮುತ್ತಪ್ಪ ರೈ ಅವ್ರ ಆಪ್ತರ ಒಬ್ಬರಾದ ಗುಣರಂಜನ್ ಶೆಟ್ಟಿ, ಜಯ ಕರ್ನಾಟಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಗುಣರಂಜನ್ ಮತ್ತು ಮನ್ಮಿತ್ ಇಬ್ಬರೂ ಮತ್ತಪ್ಪ ರೈ ಜತೆ ಇದ್ದವರು. ಈ ಹಿಂದೆಯೂ ಆಪ್ತರ ಗಲಾಟೆ ಸದ್ದು ಮಾಡಿತ್ತು.
Advertisement. Scroll to continue reading.

In this article:Anushka Shetty, Diksoochi news, diksoochi Tv, diksoochi udupi, Gunaranjan

Click to comment