ಮೈಸೂರು : ಕಬಿನಿ ಹಿನ್ನೀರಿಗೆ ಆಗಮಿಸುವಂತ ಪ್ರವಾಸಿಗರಿಗೆ ಆಕರ್ಷಣೀಯವಾಗಿದ್ದ ನೀಳ ದಂತದ ಆನೆ ಇಂದು ನಿಧನವಾಗಿದೆ. ಕಬಿನಿಯ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ಶಕ್ತಿ ಮಾನ್ ಭೋಗೇಶ್ವರ ಆನೆ ಇನ್ನಿಲ್ಲ.
ಸುಮಾರು 60 ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದಂತ ಭೋಗೇಶ್ವರ, ವಯೋಸಹಜ ಖಾಯಿಲೆಯಿಂದ ಭೋಗೇಶ್ವರ ಬಳಲುತ್ತಿತ್ತು. ಕಬಿನಿ ಹಿನ್ನೀರಿನ ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ‘ಮಿಸ್ಟರ್ ಕಬಿನಿ’ ಎಂದೇ ಖ್ಯಾತಿ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಆನೆಯ ಕಳಬರಹ ಪತ್ತೆಯಾಗಿದೆ.
ತನ್ನ 7-8 ಅಗೂ ಉದ್ದದ ನೀಳ ದಂತದ ಮೂಲಕ, ಸುಂದರ ನಡಿಗೆಯಿಂದ ಪ್ರವಾಸಿಗರನ್ನು, ಪ್ರಾಣಿ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿತ್ತು. ಆದರೆ, ಇಂದು ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದೆ.
Advertisement. Scroll to continue reading.