Connect with us

Hi, what are you looking for?

Diksoochi News

Uncategorized

ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಪಂದ್ಯ ರದ್ದು; ಟಿಕೆಟ್ ಹಣ ವಾಪಾಸ್ ಪಡೆಯಲು ಅವಕಾಶ

1

ಬೆಂಗಳೂರು : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಕ್ರಿಕೆಟ್ ಪಂದ್ಯಾವಳಿ ಮಳೆಯ ಕಾರಣದಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಟಿಕೆಟ್ ಖರೀದಿಸಿದ್ದವರಿಗೆ ಹಣ ವಾಪಾಸ್ ಪಡೆಯಲು ರಾಜ್ಯ ಕ್ರಿಕೆಟ್ ಸಂಸ್ಥೆ ಸೂಚಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವಂತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು, ಜೂನ್ 19 ರಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ 5 ನೇ ಟಿ20 ಕ್ರಿಕೆಟ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿ ಪಡಿಸಲಾಗಿತ್ತು. ಆದರೆ, ಪಂದ್ಯ ಮಳೆಯ ಕಾರಣದಿಂದಾಗಿ ರದ್ದುಗೊಂಡಿದೆ. ಹೀಗಾಗಿ ಟಿಕೆಟ್ ಹಣ ವಾಪಾಸ್ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಜೂನ್ 19ರಂದು ಟಿಕೆಟ್ ಖರೀದಿಸಿದ್ದಂತ ಕ್ರಿಕೆಟ್ ಪ್ರಿಯರು, ಜುಲೈ 1 ರಿಂದ 3ರವರೆಗೆ ಹಣ ವಾಪಾಸ್ ಪಡೆಯಬಹುದು. ಶೇ.50ರಷ್ಟು ಟಿಕೆಟ್ ಹಣವನ್ನು ವಾಪಾಸ್ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಟಿಕೆಟ್ ಪಡೆದಿದ್ದಂತವರು ಹಣ ವಾಪಾಸ್ ಪಡೆಯಬಹುದಾಗಿದೆ ಎಂದು ತಿಳಿಸಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!