ಮಾಲಿವುಡ್ : ನಟಿ ಹಾಗೂ ನಿರ್ದೇಶಕಿ ಅಂಬಿಕಾ ರಾವ್ ನಿಧನರಾಗಿದ್ದಾರೆ.ನಿನ್ನೆ ತಡರಾತ್ರಿ ಹೃದಯ ಸ್ತಂಭನವಾಗಿ ಇಹಲೋಕ ತ್ಯಜಿಸಿದ್ದಾರೆ.
ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ನಿಧನ ಹೊಂದಿದ್ದಾರೆ.
ಕೋವಿಡ್ ಒಳಗಾದ ನಂತರ ನಟಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದಕ್ಕೆ ಸೂಕ್ತ ಚಿಕಿತ್ಸೆಯು ಪಡೆಯುತ್ತಿದ್ದರು. ಆದರೆ ನಿನ್ನೆ ರಾತ್ರಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಂಬಿಕಾ ರಾವ್ ಅವರು 2002 ರಲ್ಲಿ ಬಾಲಚಂದ್ರ ಮೆನನ್ ಅವರ ನಿರ್ದೇಶನದ ‘ಕೃಷ್ಣ ಗೋಪಾಲಕೃಷ್ಣ’ ಬಿಡುಗಡೆಯೊಂದಿಗೆ ಸಹಾಯಕ ನಿರ್ದೇಶಕರಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ಅವರು ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ.

ಮಮ್ಮುಟ್ಟಿ ಅಭಿನಯದ ‘ರಾಜಮಾಣಿಕ್ಯಂ’ ಮತ್ತು ‘ತೊಮ್ಮನುಂ ಮಕ್ಕಳು’ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ‘ವೆಲ್ಲಿನಕ್ಷತ್ರಂ’ ಇತರ ಚಿತ್ರಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.
ದಿಲೀಪ್ ಅಭಿನಯದ ಬ್ಲಾಕ್ಬಸ್ಟರ್ ‘ಮೀಶಾ ಮಾಧವನ್’, ‘ಸಾಲ್ಟ್ ಅಂಡ್ ಪೆಪ್ಪರ್’, ಇತ್ತೀಚೆಗೆ ಬಿಡುಗಡೆಯಾದ ‘ಅನುರಾಗ ಕಾರಿಕ್ಕಿನ್ ವೆಲ್ಲಾಂ’, ‘ಥಮಾಶಾ’ ಮತ್ತು ‘ವೆಲ್ಲಾಂ’ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಮಧು ಸಿ. ನಾರಾಯಣನ್ ನಿರ್ದೇಶನದ ‘ಕುಂಬಳಂಗಿ ನೈಟ್ಸ್’ ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಅಂಬಿಕಾ ರಾವ್ ಖ್ಯಾತಿ ಗಳಿಸಿದರು.
ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಅಂಬಿಕಾ ಅಕಾಲಿಕ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.

