Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು.
ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕುಂದರ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಇವರಿಂದ ನೂತನ ಅಧ್ಯಕ್ಷ ದಿನೇಶ್ ಕುಮಾರ್ ನಾಯರಿ, ಕಾರ್ಯದರ್ಶಿ ಆಲ್ವಿನ್ ಅಂದ್ರಾದೆಯವರಿಗೆ ಪದಪ್ರದಾನ ಅಧಿಕಾರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಪದಪ್ರಧಾನ ನೆರವೇರಿಸಿದರು.

ಈ ಸಂದರ್ಭ ನೂತನ ಅಧ್ಯಕ್ಷ ದಿನೇಶ್ ಕುಮಾರ್ ನಾಯರಿ ಮಾತನಾಡಿ, ಈ ವರ್ಷ ಬ್ರಹ್ಮಾವರ ಭಾಗದ ಅನೇಕ ಶಾಲೆಗಳಿಗೆ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಬ್ರಹ್ಮಾವರದಲ್ಲಿ ರೋಟರಿ ವೃತ್ತ ನಿರ್ಮಾಣ ಈಗಾಗಲೇ ರೋಟರಿಯಲ್ಲಿ ಮಾಡುತ್ತಿರುವ ಉಚಿತ ಮಾಸಿಕ ಮಾನಸಿಕ ಆರೋಗ್ಯ ಶಿಬಿರವನ್ನು ಮುನ್ನಡೆಸುವುದು. ರೋಟರಿಯಿಂದ ನೀಡಲಾದ ಕಿಡ್ನಿ ಡಯಾಲಿಸಿಸ್ ಯಂತ್ರದ ಪ್ರಯೋಜನ ಎಲ್ಲಾ ವರ್ಗದ ಜನರಿಗೆ ಸಿಗುವಂತೆ ಮಾಡುವುದು. ಮಕ್ಕಳ ಉದ್ಯಾನ ಮಾಡುವ ಯೋಜನೆಯ ಗುರಿ ಹೊಂದಿದ್ದೇನೆ ಎಂದರು.


ಇದೇ ಸಂದರ್ಭದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿನಿಗಳನ್ನು ನಗದು ಪುರೆಸ್ಕಾರ ನೀಡಿ ಗೌರವಿಸಲಾಯಿತು. ಅನೇಕ ಹೊಸ ಸದಸ್ಯರು ಸೇರ್ಪಡೆಗೊಂಡರು.


ರೋಟರಿ ಪದ್ಮನಾಭ ಕಾಂಚನ್ , ಆನಂದ ಶೆಟ್ಟಿ , ಎಸ್ ಕೆ ಪ್ರಾಣೇಶ್ ವಿಜಯಕುಮಾರ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!