ಉದಯಪುರ : ಟೈಲರ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಎನ್ಐಎ ನ್ಯಾಯಾಲಯವು ದೊಡ್ಡ ತೀರ್ಪು ನೀಡಿದ್ದು, ಎನ್ಐಎ ನ್ಯಾಯಾಲಯವು ನಾಲ್ವರು ಆರೋಪಿಗಳನ್ನ ಜುಲೈ 12ರ ವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ.
ಉದಯಪುರ ಕೊಲೆ ಪ್ರಕರಣದ ಆರೋಪಿ ರಿಯಾಜ್, ಎಂ.ಡಿ. ಗೌಸ್, ಮೊಹ್ಸಿನ್ ಮತ್ತು ಆರಿಫ್ʼನನ್ನು ಜುಲೈ 12ರ ವರೆಗೆ ಕಸ್ಟಡಿಗೆ ಒಪ್ಪಿಸಲಾಗಿದೆ.
ಉದಯಪುರ ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಐಎ ಶನಿವಾರ ವಶಕ್ಕೆ ತೆಗೆದುಕೊಂಡಿತ್ತು. ಈ ಘಟನೆಯ ಪ್ರಮುಖ ಇಬ್ಬರು ಆರೋಪಿಗಳನ್ನ ಅಜ್ಮೀರ್ನ ಹೈ ಸೆಕ್ಯೂರಿಟಿ ಜೈಲಿನಿಂದ ಜೈಪುರಕ್ಕೆ ಕರೆತಂದು ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದಕ್ಕೂ ಮೊದಲು, ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಶುಕ್ರವಾರ ಬಿಗಿ ಭದ್ರತೆಯ ನಡುವೆ ಅಜ್ಮೀರ್ ಹೈ ಸೆಕ್ಯೂರಿಟಿ ಜೈಲಿಗೆ ಕರೆತರಲಾಗಿತ್ತು.

ಅಂದ್ಹಾಗೆ, ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ರಾಜಸ್ತಾನದ ಉದಯಪುರದ ಕನ್ಹಯ್ಯಾ ಲಾಲ್ ಎಂಬ ಟೈಲರ್ʼನನ್ನ ಇಬ್ಬರು ಕಿರಾಕರು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆಯ ನಂತರ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಘಟನೆಯ ನಂತರ ರಾಜ್ಯದಲ್ಲಿ ಉದ್ವಿಗ್ನ ವಾತಾವರಣವಿದ್ದು, ರಾಜಸ್ಥಾನ ಸರ್ಕಾರವು ಸೆಕ್ಷನ್ 144 ಅನ್ನು ಒಂದು ತಿಂಗಳ ಕಾಲ ವಿಧಿಸಿದೆ.