Connect with us

Hi, what are you looking for?

Diksoochi News

ರಾಜ್ಯ

ಆಗುಂಬೆ ಭೂಕುಸಿತ : ತಜ್ಞರಿಂದ ಪರಿಶೀಲನೆ

1

ವರದಿ : ಶ್ರೀದತ್ತ ಹೆಬ್ರಿ

ಆಗುಂಬೆ : ಆಗುಂಬೆಯ ನಾಲ್ಕನೇ ತಿರುವಿನಲ್ಲಿ ಸಂಭವಿಸಿದ್ದ ಭೂ ಕುಸಿತವನ್ನು ಹೈದರಾಬಾದಿನ ತಜ್ಞ ವಿಷ್ಣುಮೂರ್ತಿ ಮಂಗಳವಾರ ಪರಿಶೀಲನೆ ನಡೆಸಿದರು. ಬುಧವಾರದಿಂದ ಅಪಾಯಕಾರಿ ತಿರುವುಗಳಲ್ಲಿ ಸರ್ವೆ ನಡೆಸಿ ಯಾವೆಲ್ಲ ಕಾರ್ಯಯೋಜನೆ ರೂಪಿಸಿ ತಡೆಗೋಡೆ ನಿರ್ಮಿಸುವುದರ ಬಗ್ಗೆ ವಿಷ್ಣುಮೂರ್ತಿ ಸಲಹೆ ನೀಡಲಿದ್ದಾರೆ. ತಜ್ಞರ ಅಭಿಪ್ರಾಯದಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಎಲ್ಲರ ಸಮನ್ವಯ ನಿರ್ಧಾರದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಇಇ ನಾಗರಾಜ್ ನಾಯ್ಕ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಇಂಜಿನಿಯರ್ ಗಳಾದ ಶಶಿಧರ್ ಹಾಗೂ ನವೀನ್ ರಾಜ್ ಹಾಗೂ ಹೆದ್ದಾರಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement. Scroll to continue reading.

ಲಘು ವಾಹನಗಳಿಗೆ ಸಂಚಾರಕ್ಕೆ ಅವಕಾಶ :

ಕಳೆದೆರಡು ದಿನಗಳಿಂದ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ಸಂಚಾರ ಸ್ತಬ್ದಗೊಂಡಿದೆ. ಮಣ್ಣು ತೆರವುಗೊಂಡ ನಂತರ ಮಂಗಳವಾರ ಬೆಳಗಿನಿಂದ ಲಘು ವಾಹನಗಳ ಓಡಾಟ ಶುರುವಾಗಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗಮಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!