Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಭಾರೀ ಮಳೆಗೆ ನಲುಗಿದ ನೀಲಾವರ ಕಿಂಡಿ ಆಣೆಕಟ್ಟು; ಸಂಪರ್ಕ ಕಡಿತ

1

ವರದಿ : ಬಿ‌.ಎಸ್.ಆಚಾರ್ಯ

ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ಪ್ರಥಮವಾಗಿ ರೈತ ಕೃಷಿಕರಿಗಾಗಿ ಉಪಯುಕ್ತವಾಗುವಂತೆ ಬಾರಕೂರು ಬಳಿ ನೀಲಾವರ ಬಳಿ ಮಾಡಲಾದ ಕಿಂಡಿ ಅಣೆಕಟ್ಟು ಈ ವರ್ಷ ಬಾರೀ ಮಳೆಗೆ ಮುಳುಗಡೆಗೊಂಡುದಲ್ಲಿದೇ ಅಪಾರ ಮರ ಮಟ್ಟುಗಳು ಸಿಲುಕಿಕೊಂಡು ಕೃತಕ ನೆರೆಯ ಜೊತೆ ಸಂಪರ್ಕ ಕಡಿತಗೊಂಡಿದೆ.
ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಕಿಂಡಿ ಅಣೆಕಟ್ಟಿನ ಮೇಲೆ ನೀರು ಹರಿದಿದೆ.
ಬುಧವಾರ ನೀರಿನ ಮಟ್ಟ ಕೊಂಚ ಇಳಿಮುಖವಾದಾಗ ಕಂಡು ಬಂದಾಗ ಬೃಹತ್ ಮರಗಳು ಸಿಲುಕಿಕೊಂಡು ಬಂಡೀಮಠ ಹನೆಹಳ್ಳಿ ಭಾಗ ಜನರು ನೀಲಾವರ ಮಟಪಾಡಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ.

ಪೂರ್ವ ಭಾಗದಿಂದ ರಿದು ಬರುವ ನೀರಿನ ರಭಸಕ್ಕೆ ಬಾರಿ ಗಾತ್ರದ ಮರಗಳು ತೇಲಿ ಬಂದು ಸಿಲಿಕಿಕೊಂಡಿದೆ.
ನೆರೆಯ ಭೀಕರತೆಗೆ ಅಣೆ ಕಟ್ಟಿನ ಉತ್ತರ ಭಾಗದ ಸಂಪರ್ಕ ಪೂರಾ ಕುಸಿತಗೊಂಡು ಸಂಚರಿಸಲು ಅಸಾಧ್ಯವಾಗುತ್ತಿದೆ.

Advertisement. Scroll to continue reading.


ಡಿಸೆಂಬರ್ ತಿಂಗಳಲ್ಲಿ ಕಿಂಡಿಗೆ ಮರದ ಹಲಗೆ ಜೋಡಿಸಿ ಮೇ ತಿಂಗಳಲ್ಲಿ ತೆರೆಯುವ ಈ ಕಿಂಡಿ ಅಣೆಕಟ್ಟಿಗೆ ಫೈಬರ್ ಡೋರ್ ಅಳವಡಿಕೆ ಮಾಡಬೇಕು ಮತ್ತು ಯಾಂತ್ರೀಕೃತ ಕೃಷಿಯಲ್ಲಿ ತೊಡಗಿಸಿಕೊಂಡ ರೈತರಿಗೆ ಉಳುಮೆ ಮಾಡುವ ಟಿಲ್ಲರ್ ಕಟಾವು ಯಂತ್ರ ಗೊಬ್ಬರ ಸೇರಿದಂತೆ ವಾಹನ ಸಾಗಾಟಕ್ಕೆ ಅಣೆಕಟ್ಟು ಅಗಲೀಕರಣ ಗೊಳ್ಳ ಬೇಕು ಎನ್ನುವ ಇಲ್ಲಿನ ರೈತರ ಬೇಡಿಕೆ ಇನ್ನೂ ಈಡೇರಿಸಿಲ್ಲ.


ಸಣ್ಣ ನೀರಾವರಿ ಇಲಾಖೆ ಒಮ್ಮೆ ಇಲ್ಲಿನ ಕಿಂಡಿ ಅಣೆಕಟ್ಟಿಗೆ ಬದಿಯ ರಿವಿಟೆಮೆಂಟ್ ಮಾಡಿ ಅಗಲೀಕರಣ ಮಾಡುವ ಮತ್ತು ರೈತರಿಗೆ ಅನುಕೂಲವಾಗುವ ವಾಹನ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ಮಾಡಲು ಅಂದಾಜು ಪಟ್ಟಿ ಮಾಡಿತ್ತು .
ಆದರೆ ರೈತರ ಬೇಡಿಕೆ ಮಾತ್ರ ಈಡೇರಿಕೆಯಾಗಿಲ್ಲ. ಮಂತ್ರಿಗಳು ಅಧಿಕಾರಿಗಳು ವಾಹನ ಸಂಚಾರ ಇರುವ ಭಾಗಕ್ಕೆ ಮಾತ್ರ ಭೇಟಿ ನೀಡಿ, ಕೇವಲ ಸಮುದ್ರ ಕೊರೆತವನ್ನು ಮಾತ್ರ ಕಾಣುವ ಆಡಳಿತ ಮತ್ತು ಅಧಿಕಾರಿಗಳು ನದಿಗಳ ಗಂಭೀರ ಸಮಸ್ಯೆಗಳಿಗೆ ಕೂಡಾ ಪರಿಹಾರ ಕಲ್ಪಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!