Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಸೋನಿಯಾ ಗಾಂಧಿ ಇಡಿ ವಿಚಾರಣೆ; ಕಾಂಗ್ರೆಸ್ ನಿಂದ ಪ್ರತಿಭಟನೆ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಉಡುಪಿ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕೇಂದ್ರ ಸರಕಾರದ ಅಧೀನದ ಇಡಿ ಇಲಾಖೆ ಮೂಲಕ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಇದರ ವಿರುದ್ಧ ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹೋಲಿ ಫ್ಯಾಮಿಲಿ ಚರ್ಚ್ ಬಳಿಯಿಂದ ಸಾಗಿ ಬಂದು ಬಸ್ ನಿಲ್ದಾಣದ ಬಳಿ ಸಭೆ ಜರುಗಿತು.


ಈ ಸಂದರ್ಭ ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಆಡಳಿತ ಬಿಜೆಪಿ ಪಕ್ಷ ಗಾಂಧೀ ವಂಶವನ್ನು ಮತ್ತು ಕಾಂಗ್ರೇಸ್ ಪಕ್ಷವನ್ನು ನಿರ್ನಾಮ ಮಾಡುವ ಹಲವಾರು ವಾಮ ಮಾರ್ಗದ ಮೂಲಕ ಮಾಡುತ್ತಿರುವ ಸಂಚಿನಲ್ಲಿ ದೇಶಕ್ಕೆ ಹಲವಾರು ಕೊಡುಗೆಯನ್ನು ನೀಡಿದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಯಾವೂದೇ ಪೋಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೇಸು ಆಗಲಿ ಅಪರಾಧವಾಗಲಿ, ದಾಖಲಾಗದೆ ದಿನ ಗಟ್ಟಲೆ ಅವರನ್ನು ಅಪರಾಧಿ ಸ್ಥಾನದಲ್ಲಿ ಕುಳ್ಳಿರಿಸಿದೆ. ಇದನ್ನು ದೇಶವೇ ಪ್ರತಿಭಟಿಸುತ್ತದೆ ಎಂದರು.


ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅಶೋಕ ಕೊಡವೂರು , ಕಾಂಗ್ರೇಸ್ ಪ್ರಮುಖರಾದ ವೆರೊನಿಕಾ ಕರ್ನೆಲಿಯೋ , ಎಂ ಏ ಗಫೂರ್ , ಕೃಷ್ಣ ಮೂರ್ತಿ ಆಚಾರ್ಯ ,ರಮೇಶ್ ಕಾಂಚನ್ , ಸೌರಭ್ ಬಲ್ಲಾಳ್ , ಪಖ್ಯಾತ್ ಶೆಟ್ಟಿ, ದಿನಕರ ಹೇರೂರು , ಭುಜಂಗ ಶೆಟ್ಟಿ ಜಿಲ್ಲೆಯ ನಾನಾ ಭಾಗದ ಕಾಂಗ್ರೇಸ್ ಮುಖಂಡರು ಪ್ರತಿಭಟನೆಯಲ್ಲಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!