ಕೆಮ್ರಾಲ್ : ಕೆಮ್ರಾಲ್ ಗ್ರಾಪಂ ವ್ಯಾಪ್ತಿಯ ಹೊಸಕಾಡು ಭೋಜರಾವ್ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದೆ. ಮಣ್ಣಿನ ರಸ್ತೆಯಾಗಿದ್ದು, ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುವುದರಿಂದ ವಾಹನಗಳಿಗೆ ಮಾತ್ರವಲ್ಲ ಜನರು ನಡೆದಾಡಲು ಸಂಕಷ್ಟ ಅನುಭವಿಸುವಂತಾಗಿದೆ.
500 ಮೀ ರಸ್ತೆಯುದ್ದಕ್ಕೂ ಹದಗೆಟ್ಟಿದೆ. ಈ ಭಾಗದ ಮಂದಿಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ದನದ ಫಾರ್ಮ್ ಹಾಲು, ಹಿಂಡಿ, ಗೊಬ್ಬರ ಸಾಗಾಟ ಎಲ್ಲದಕ್ಕೂ ಸಮಸ್ಯೆಯೇ. ದನದ ಸೆಗಣಿ ಶೇಖರಣೆಯಾಗಿ ಮಳೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ದನಗಳ್ಳರ ಹಾವಳಿ ಬೇರೆ.

ಬೀದಿ ದೀಪದ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿ ಮಂದಿಯ ಗೋಳು. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.

Advertisement. Scroll to continue reading.



































