Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಚಾರ ಗರಡಿಯಲ್ಲಿ ಕೆಸರ್ಡ್ ಒಂಜಿ ದಿನ; ಸಚಿವ ಸುನಿಲ್ ಕುಮಾರ್ ಉದ್ಘಾಟನೆ

2

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ದೈವರಾಧನೆಯನ್ನು ಕಲೆಯ ವ್ಯಾಪ್ತಿಗೊಳಪಡಿಸಿ 60 ವರ್ಷ ತುಂಬಿದ ದೈವರಾಧಕರಿಗೆ ಮಾಸಿಕ 2ಸಾವಿರ ರೂಪಾಯಿ ಮಾಶಸನ ನೀಡುವ ಮಹತ್ವದ ನಿರ್ಧಾರವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಬಿಜೆಪಿ ಸರ್ಕಾರ ಮಾಡಿದೆ. ಅರ್ಹರು ಯೋಜನೆಯ ಪ್ರಯೋಜನ ಪಡೆಯಬೇಕು. ಸಭೆಯನ್ನು ಒಕ್ಕೂಟದ ಮೂಲಕ ಎರ್ಪಡಿಸಿದರೆ ಅಧಿಕಾರಿಗಳನ್ನು ಸಭೆಗೆ ಕರೆಸಿ ಸುಲಭವಾಗಿ ನೊಂದಾವಣೆ ಪ್ರಕ್ರಿಯೆ ನಡೆಸಿಕೊಡಿಸುವುದಾಗಿ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.


ಅವರು ಹೆಬ್ರಿ ತಾಲ್ಲೂಕು ತುಳುನಾಡ ದೈವರಾಧಕರ ಒಕ್ಕೂಟದ ವತಿಯಿಂದ ಭಾನುವಾರ.ನಡೆದ 3 ನೇ ವರ್ಷದ ವಾರ್ಷಿಕೋತ್ಸವದ ಕೆಸರಡ್ ಒಂಜಿ ದಿನ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಸರು ಗದ್ದೆ ಕಾರ್ಯಕ್ರಮಗಳು ಈಗ ಅಲ್ಲಲ್ಲಿ ವಿಶೇಷವಾಗಿ ನಡೆಯುತ್ತಿದ್ದು, ಮನಸ್ಸು ಮನಸ್ಸುಗಳು ಗಟ್ಟಿಯಾಗಿ ಬಾಂಧವ್ಯ ಬೆಸೆಯುವ ಕಾರ್ಯ ನಡೆಯಲಿ. ತುಳುನಾಡ ದೈವರಾಧಕರ ಒಕ್ಕೂಟವು ಇನ್ನಷ್ಟು ಗಟ್ಟಿಯಾಗಿ ಎಲ್ಲರಿಗೂ ಮಾದರಿಯಾಗಲಿ. ದೈವರಾಧನೆಯೂ ನಮಗೆ ದೈವದತ್ತವಾಗಿ ಬಂದಿದೆ. ದೈವ ದೇವರುಗಳ ಶಕ್ತಿ ಯಿಂದ ನಾಡು ಸುಭಿಕ್ಷೆಯಾಗಲಿ. ಅಭಿವೃದ್ಧಿಯ ಜೊತೆಗೆ ಕೃಷಿಯನ್ನು ಮರೆಯದೆ ಸಮೃದ್ಧವಾಗಿ ಮಾಡಿ ಕೃಷಿಯ ವೈಭವ ಮತ್ತೇ ಮೆಳೈಸಲಿ ಎಂದು ಶುಭ ಕೋರಿದರು.

ಹೆಬ್ರಿ ತಾಲ್ಲೂಕು ದೈವರಾಧಕರ ಒಕ್ಕೂಟದ ಅಧ್ಯಕ್ಷ ಮುದ್ರಾಡಿ ಸುಕುಮಾರ ಬಿ. ಪೂಜಾರಿ ಅಧ್ಯಕ್ಷ ತೆ ವಹಿಸಿ ಮಾತನಾಡಿ ಒಕ್ಕೂಟವನ್ಬು ಎಲ್ಲರೂ ಸೇರಿ ಗಟ್ಟಿಯಾಗಿ ಕಟ್ಟಿ ಮುನ್ನಡೆಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Advertisement. Scroll to continue reading.


ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡೆಗಳು ನಡೆಯಿತು. ಹಿರಿಯ ದೈವಚಾಕರಿಯವರನ್ನು ಸನ್ಮಾನಿಸಲಾಯಿತು.

ಚಾರ ಗ್ರಾಮ‌ ಪಂಚಾಯಿತಿ ಅಧ್ಯಕ್ಷೆ ಕುಸುಮ ಪ್ರಭು, ಸದಸ್ಯ ಸಂತೋಷ ಶೆಟ್ಟಿ, ಉದ್ಯಮಿ ಗೋಳಿಯಂಗಡಿ ಕರುಣಾಕರ ಶೆಟ್ಟಿ, ಚಾರ ವಾದಿರಾಜ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಮೇಲ್ಬೆಟ್ಟು ಗರಡಿಯ ಅಧ್ಯಕ್ಷ ಸುರೇಶ್ ಹೆಗ್ಡೆ, ಕೆರ್ಜಾಡಿ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಯತಿರಾಜ್ ಶೆಟ್ಟಿ, ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಸುದರ್ಶನ್ ದೊಡ್ಡಮನಿ, ಬಿಜೆಪಿ ನಾಯಕ ಉದಯ ಎಸ್, ಒಕ್ಕೂಟದ ಗೌರವಾಧ್ಯಕ್ಷ ಭೋಜ ಪೂಜಾರಿ, ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

ಸಚಿನ್ ಪೆರ್ಡೂರು ನಿರೂಪಿಸಿ, ಸಂತೋಷ್ ಸ್ವಾಗತಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!