ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿಗಾಗಿ ದೇಶದ ಪ್ರಧಾನ ಮಂತ್ರಿಯವರ ಆಶಯದಂತೆ ಹರ್ ಘರ್ ತಿರಂಗಾ ಜಾಗೃತಿ ಜಾಥಾ ಬುಧವಾರ ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಜರುಗಿತು.
ಕಾಲೇಜಿನ ಬಳಿ ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ ಪಂಡರಿನಾಥ್ ಜಾಥಾಕ್ಕೆ ಚಾಲನೆ ನೀಡಿದರು.
ಕಾಲೇಜಿನಿಂದ ಹೊರಟ ಜಾಥಾ ರಾಷ್ಟ್ರೀಯ ಹೆದ್ದಾರಿ ೬೬ ರ ಮೂಲಕ ಆಕಾಶವಾಣಿ ವೃತ್ತ ಮತ್ತು ರಥ ಬೀದಿ ಮೂಲಕ ಸಾಗಿ ಬಂತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ದೇವಾನಂದ ನಾಯಕ್ ಕಾಲೇಜಿನ ಪ್ರಿನ್ಸಿಪಾಲ್ ಪ್ರಸನ್ನ ಶೆಟ್ಟಿ , ವೈಸ್ ಪ್ರಿನ್ಸಿಪಾಲ್ ವಿದ್ಯಾಲತಾ , ರಾಷ್ಟ್ರೀಯ ಸೇವಾ ಯೋಜನಾ ಘಟಕದ ರಘುರಾಮ್ ಶೆಟ್ಟಿ , ಮಮತಾ ಮೇರಿ ಅಮ್ಮನ್ನಾ ಮತ್ತು ಕಾಲೇಜಿನ ಶಿಕ್ಷಕರು ಸಿಬ್ಬಂದಿಗಳು ಮತ್ತು ೮೦೦ ವಿದ್ಯಾರ್ಥಿಗಳು ಜಾಥಾ ದಲ್ಲಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, SMS college Brahmavar

Click to comment