ಮಂಡ್ಯ : ತಾಯಿ ತನ್ನ ಸಮಯಪ್ರಜ್ಞೆಯಿಂದ ಹಾವು ಕಡಿತದಿಂದ ಮಗನನ್ನು ಕಾಪಾಡುವ ದೃಶ್ಯ ವೈರಲ್ ಆಗಿದೆ. ಎದೆ ಝಲ್ಲೆನಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮನೆಯಿಂದ ತಾಯಿ ಮಗ ಹೊರಬರುವ ವೇಳೆ ಈ ನಡುಕ ಉಂಟು ಮಾಡುವ ಘಟನೆ ನಡೆದಿದೆ.
ತಾಯಿ ಮಗ ಹೊರ ಬರುತ್ತಿರುತ್ತಾರೆ. ಮೆಟ್ಟಿಲ ಕೆಳಗೆ ನಾಗರ ಹಾವು ಹರಿದು ಹೋಗುತ್ತಿರುತ್ತದೆ. ಇದನ್ನು ಗಮನಿಸದೆ ಬಾಲಕ ಹಾವಿನ ಬಳಿ ಹೆಜ್ಜೆ ಇಟ್ಟಿದ್ದಾನೆ. ಹಾವನ್ನು ಕಂಡು
ಅಷ್ಟರಲ್ಲಿ ತಾಯಿ ಗಮನಿಸಿ, ಚೀರಾಡುತ್ತ ಮಗು ಬಳಿ ತಾಯಿ ಓಡಿ ಬಂದಿದ್ದಾರೆ ಇನ್ನೇನು ಹೆಡೆ ಎತ್ತಿ ಕಚ್ಚಲು ಬರುತ್ತಿದ್ದಂತೆ ಮಗುವನ್ನು ತನ್ನತ್ತ ಎಳೆದುಕೊಂಡು ಕಾಪಾಡಿದ್ದಾರೆ. ಕ್ಷಣಮಾತ್ರದಲ್ಲಿ ಹಾವಿನಿಂದ ಮಗು ಪಾರಾಗಿದೆ.
Advertisement. Scroll to continue reading.

ಇಲ್ಲಿನವೈದ್ಯನಾಥಪುರಕ್ಕೆ ತೆರಳುವ ಕೆಮ್ಮಣ್ಣು ಕಾಲುವೆ ರಸ್ತೆಯ ಬಡವಾಣೆಯಲ್ಲಿ ಘಟನೆ ಎಂದು ಹೇಳಲಾಗಿದ್ದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವೀಡಿಯೋ : ಲಿಂಕ್ 👇👇
Advertisement. Scroll to continue reading.
