Connect with us

Hi, what are you looking for?

Diksoochi News

ಸಾಹಿತ್ಯ

ಕವಿ ಮನೆಯಲ್ಲಿ ಕವಿ ಸಮ್ಮಿಲನ : ಡಾ.ರಾಘವೇಂದ್ರ ರಾವ್‌ಗೆ ಕಾವ್ಯ ಪುರಸ್ಕಾರ

1

ತೀರ್ಥಹಳ್ಳಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ ರಾಜ್ಯಮಟ್ಟದ ಕಾವ್ಯರಚನಾ ಸ್ಪರ್ಧೆಯಲ್ಲಿ ಡಾ. ರಾಘವೇಂದ್ರ ರಾವ್ , ಉಡುಪಿ ಇವರ ” ಪ್ರಕೃತಿಯ ಶಿಶು ನಾನು ” ಶೀರ್ಷಿಕೆಯ ಕಾವ್ಯಭಾಗವು ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತದೆ.

ಕುಪ್ಪಳ್ಳಿಯ ಕುವೆಂಪು ಮನೆಯಲ್ಲಿ ನಡೆದ ” ಕವಿಮನೆಯಲ್ಲಿ ಕವಿ ಸಮ್ಮಿಲನ ” ಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 10,000 ರೂ.ನಗದು ಬಹುಮಾನವನ್ನು ಒಳಗೊಂಡಿದೆ.

ಡಾ.ರಾಘವೇಂದ್ರ ರಾವ್ ಅವರು ಪಡುಬಿದ್ರೆ ಗಣಪತಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದು,
ಕನ್ನಡ, ಹಿಂದಿ, ಸಂಸ್ಕೃತ ಎಂ.ಎ ಮತ್ತು ಜ್ಯೋತಿಷ ಶಾಸ್ತ್ರ ದಲ್ಲಿ ಪಿಹೆಚ್‌ಡಿ ಪಡೆದಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!