ಉಡುಪಿ : ಅಖಿಲ ಭಾರತ ತುಳುನಾಡ
ದೈವಾರಾಧಕರ ಒಕ್ಕೂಟ ಉಡುಪಿ ವತಿಯಿಂದ
75ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭ ಬೊಬ್ಬರ್ಯ ದೈವಸ್ಥಾನದಲ್ಲಿ ವಠಾರದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಒಕ್ಕೂಟದ ಹಿರಿಯ ಹಾಗೂ ಸದಸ್ಯ, ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ದೈವಚಾಕ್ರಿ ಮಾಡುತ್ತಿರುವ ಸರಳ ಸಜ್ಜನಿಕೆ ಹೆಸರಾಂತ ಕೊರಗ ಸಮುದಾಯದ ಡೋಲು ಬಾರಿಸುವ ಮೂಲಕ ದೈವಚಾಕ್ರಿ ಮಾಡಿದಂತ ಬಾಬು ಅಲೆವೂರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೊಬ್ಬರ್ಯ ಯುವ ಸೇವ ಸಮಿತಿ ಅಧ್ಯಕ್ಷ ವರದರಾಜ ಕಾಮತ್ ಉಡುಪಿ, ಬ್ರಹ್ಮಾವರ ಘಟಕದ ಅಧ್ಯಕ್ಷ ಹಾಗೂ ಉಡುಪಿ ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷ ಯೋಗೀಶ್ ಪೂಜಾರಿ,
ಮಹೇಶ್ ಪಂಬದ,, ವಾಮನ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘಟನೆ ಕಾರ್ಯದರ್ಶಿ ರಕ್ಷಿತ್ ಕೋಟ್ಯಾನ್ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ವಂದಿಸಿದರು.
Advertisement. Scroll to continue reading.

In this article:akhila bharatha tulunada dhaivaradhakara okkuta, Diksoochi news, diksoochi Tv, diksoochi udupi, independence day

Click to comment