ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡ ಗೋವಿಗಾಗಿ ಮೇವು ಅಭಿಯಾನ ಎಲ್ಲಾ ಭಾಗದಲ್ಲಿ ನಡೆಯಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿಯವರ ನೇತೃತ್ವದಲ್ಲಿ ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಅಗಸ್ಟ್ ಸಮಯದಲ್ಲಿ ಹಸಿ ಹುಲ್ಲನ್ನು ಕಟಾವು ಮಾಡಿ ಗೋಶಾಲೆಗೆ ನೀಡುವ ವಿನೂತನ ಪರಿಕಲ್ಪನೆಯ ಈ ವರ್ಷದ ಗೋವಿಗಾಗಿ ಮೇವು ಅಭಿಯಾನವನ್ನು ಅವರು ಕುಂಜಾಲು ರಸ್ತೆಯ ಬಳಿ ಉದ್ಘಾಟಿಸಿ ಮಾತನಾಡಿ, ಪೇಜಾವರ ವಿಶ್ವ ಪ್ರಸನ್ನ ತೀರ್ಥರ ಮಾರ್ಗದರ್ಶನಲ್ಲಿ ನೀಲಾವರದಲ್ಲಿರುವ ಅನಾಥ ಗೋವುಗಳಿಗೆ ಜಿಲ್ಲೆಯ ನಾನಾ ಸಂಘ ಸಂಸ್ಥೆಗಳ ಮೂಲಕ ಅಭಿಯಾನಕ್ಕೆ ಬೆಂಬಲದೊರೆತಿದೆ ಎಂದರು.

ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಗೋಶಾಲೆಗಳು ಸಂಕಷ್ಟಕ್ಕೊಳಗಾದಾಗ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟಿಕೊಂಡ ಗೋವಿಗಾಗಿ ಮೇವು ಸಂಘಟನೆಯ ಸೇವಾ ಕಾರ್ಯ ಪ್ರಧಾನಿ ನರೇಂದ್ರ ಮೋದಿಯವರ ತನಕ ತಲುಪಿಸುವ ಅಗತ್ಯ ಇದೆ ಎಂದರು.
ಗೋವಿಗಾಗಿ ಮೇವು ಅಭಿಯಾನದ ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಯುವ ಮುಖಂಡ ರಾಜೇಶ್ ಶೆಟ್ಟಿ ಬಿರ್ತಿ,ಮಾಜಿ ಜಿಪ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ,ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಉಮೇಶ್ ನಾಯ್ಕ್,ನೀಲಾವರ ಗ್ರಾಮಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್,ಉಡುಪಿ ಪಂಚಾಯತ್ ರಾಜ್ ಪ್ರಕೋಷ್ಠ ಸಂಚಾಲಕ ರಾಜು ಕುಲಾಲ್ ,ಉಡುಪಿ ವಲಯ ಅಧ್ಯಕ್ಷ ರಂಜನ್ ಶೆಟ್ಟಿ, ಕೋಟ ವಲಯ ಅಧ್ಯಕ್ಷ ,ಬ್ರಹ್ಮಾವರ ವಲಯ ಅಧ್ಯಕ್ಷ ರಕ್ಷಿತ್ ಪೂಜಾರಿ ಬಾರ್ಕೂರು,ಕೋಟ ವಲಯ ಅಧ್ಯಕ್ಷ ಕೃಷ್ಣ ಮೂರ್ತಿ ಮರಕಾಲ,ಮಂದಾರ್ತಿ ವಲಯ ಅಧ್ಯಕ್ಷ ಹರೀಶ್ ಶೆಟ್ಟಿ ಸೈಬ್ರಕಟ್ಟೆ,ಜಿಲ್ಲಾ ಉಪಾಧ್ಯಕ್ಷ ವಿಜಯ್ ಗಾಣಿಗ ಸಾಲಿಗ್ರಾಮ ,ಬ್ರಹ್ಮಾವರ ವಲಯ ಗೌರವ ಅಧ್ಯಕ್ಷ ಸತ್ಯರಾಜ್ ಬಿರ್ತಿ,ಕಾರ್ಯದರ್ಶಿ ಮಹೇಂದ್ರ ಶೆಟ್ಟಿ ಶಿರಿಯಾರ,ಪ್ರದೀಪ್ ಪೂಜಾರಿ ,ಗೌತಮ್ ಎ.ಪಿ ಹೆಗ್ಡೆ ಬಿಲ್ಲಾಡಿ, ಅಮ್ರತ್ ಪೂಜಾರಿ,ಲೋಕೇಶ್ ಮರಕಾಲ ಇನ್ನಿತರು ಉಪಸ್ಥಿತರಿದ್ದರು.
ಬ್ರಹ್ಮಾವರದಿಂದ-ನೀಲಾವರದ ತನಕ ವಾಹನ ಜಾಥಾ ಮೂಲಕ ನೀಲಾವರಕ್ಕೆ ಹಸಿ ಹುಲ್ಲುಗಳನ್ನು ಹಲವಾರು ಟೆಂಪೋ ಮೂಲಕ ಸಾಗಿಸಲಾಯಿತು.
