ಉಡುಪಿ : ಈ ಬಾರಿ ಉಡುಪಿಯ ಮಾರುತಿ ವೀಥೀಕಾದಲ್ಲಿರುವ 22ನೇ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಉಡುಪಿ ಖ್ಯಾತ ಕಲಾವಿದ ಮಹೇಶ್ ಮರ್ಣೆ ಅವರ ಅದ್ಭುತ ಕಲಾ ಕೃತಿಯಲ್ಲಿ ಒಂದಾದ ಬಾಟಲಿಯ ಒಳಗೆ ಆವೆ ಮಣ್ಣೆನಿಂದ ಸುಮಾರು 10 ವರ್ಷ ಈಹಿಂದೆ ರಚಿಸಲ್ಪಟ್ಟ ಗಣೇಶ ವಿಗ್ರಹವನ್ನು ಕಲಾಸಕ್ತರಿಗೆ ವೀಕ್ಷಿಸಲು ನಮ್ಮ ಮಾರುತಿವೀಥೀಕಾದ ಶ್ಯಾಮ್ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಗಣಪತಿಯ ಕಲಾ ಕೃತಿಯಲ್ಲಿಯೂ ಬಣ್ಣ ಸಹಿತ ರಚನೆ ಮಾಡಿರುವುದು ಅದ್ಭುತ ಕಲಾಕೃತಿಗಳಲ್ಲಿ ಒಂದಾಗಿದೆ. ಆದುದರಿಂದ ಆಗಸ್ಟ್ 31ರ ಬುಧವಾರ ಚೌತಿಯದಿನದಂದು ಬೆಳಿಗ್ಗೆನಿಂದ ಸಂಜೆಯ ತನಕ ಗಣಪತಿಯ ಪೆಂಡಾಲಿನಲ್ಲಿ ಇಡಲಾಗುವುದು. ಕಲಾಸಕ್ತರಿಗೆ, ಸಾರ್ವಜನಿಕರಿಗೆ ವೀಕ್ಷಿಸಲು ಉಚಿತಅವಕಾಶ ಇದೆ ಎಂದು ಮಾರುತಿ ವೀಥೀಕಾದಲ್ಲಿರುವ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement. Scroll to continue reading.
