ದಿನಾಂಕ : ೨೭-೦೭-೨೨, ವಾರ: ಶನಿವಾರ, ನಕ್ಷತ್ರ : ಮಖಾ, ತಿಥಿ : ಅಮಾವಾಸ್ಯೆ
ದೊಡ್ಡ ವ್ಯವಹಾರಗಳಲ್ಲಿ ನಿಮಗೆ ಲಾಭ ಇರಲಿದೆ. ಹಿತಶತ್ರುಗಳ ಕುರಿತು ಎಚ್ಚರದಿಂದ ಇರುವುದು ಉತ್ತಮ. ರಾಮನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು ಗಳಿಸುವಿರಿ. ಸಾಮಾಜಿಕ ಸ್ಥಾನಮಾನ ಗೌರವ ಪ್ರಾಪ್ತಿ. ನಾಗಾರಾಧನೆ ಮಾಡಿ.

ದೂರ ಪ್ರಯಾಣ ಬೇಡ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಶಿವನ ಆರಾಧಿಸಿ.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ. ದೇವಿಯ ನೆನೆಯಿರಿ.
ಖರ್ಚು ಕಡಿಮೆಯಾಗಲಿದೆ. ಇಂದು ಕುಟುಂಬದೊಂದಿಗೆ ಸಮಯ ಕಳೆಯುವಿರಿ. ವಿಷ್ಣುವನ್ನು ನೆನೆಯಿರಿ.
ಧಾರ್ಮಿಕ ಕಾರ್ಯಗಳತ್ತ ಗಮನ ಹರಿಸುವಿರಿ. ಆರೋಗ್ಯದ ಕಾಳಜಿ ಇರಲಿ. ರಾಮನ ನೆನೆಯಿರಿ.

ಅನಾವಶ್ಯಕ ವಿಷಯಗಳಿಂದ ದೂರವಿರಿ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುವುದು ಉತ್ತಮ. ಮಂಜುನಾಥನ ನೆನೆಯಿರಿ.
ಯಾರೊಂದಿಗಾದರೂ ತಾಳ್ಮೆಯಿಂದ ವ್ಯವಹರಿಸುವುದು ಉತ್ತಮ. ವ್ಯಾಪಾರಿಗಳಿಗೆ ಲಾಭ ಇರಲಿದೆ. ಶಿವನ ಆರಾಧಿಸಿ.
ಆದಷ್ಟು ಕೆಲಸದೊತ್ತಡ ಕಡಿಮೆ ಮಾಡಿಕೊಂಡರೆ ಉತ್ತಮ. ಸ್ವಾರ್ಥ ಮನೋಭಾವ ಬಿಡಿ. ಶನೈಶ್ಚರನ ನೆನೆಯಿರಿ.
ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಕೌಟುಂಬಿಕ ನೆಮ್ಮದಿ, ಸಂತಸ. ಗಣಪನ ನೆನೆಯಿರಿ.

ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಮಾತಿನಲ್ಲಿ ಹಿಡಿತವಿರಲಿ. ಪ್ರಯಾಣ ಬೇಡ. ರಾಯರ ಆರಾಧಿಸಿ.
ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಗುರುವ ನೆನೆಯಿರಿ.

