ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಾಲು ಉತ್ಪಾದಕರ ಸಂಘ ಗುಣಮಟ್ಟದಲ್ಲಿ ಮೊದಲ ಸ್ಥಾನ ಪಡೆಯಲು ಭಾರೀ ಕಷ್ಟ ಇದೆ ಎಂದು ವಿಸ್ತರಣಾಧಿಕಾರಿ ಪ್ರತಿಭಾ ಹೇಳಿದರು.
ಭಾನುವಾರ ಕೂರಾಡಿ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬ್ರಹ್ಮಾವರ ತಾಲೂಕಿನ ೧೩೯ ಸಂಘದಲ್ಲಿ ಸತತ ೬ ನೇ ವರ್ಷದಿಂದ ಗುಣಮಟ್ಟದಲ್ಲಿ ಕೂರಾಡಿ ಸಂಘ ಪ್ರಥಮ ಸ್ಥಾನದಲ್ಲಿರುವುದರ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿ ಮಾತನಾಡಿದರು.
Advertisement. Scroll to continue reading.


ಸಂಘದ ಅಧ್ಯಕ್ಷೆ ರಜನಿ ಎಸ್ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾಧಿಕಾರಿ ಸರಸ್ವತಿ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶೇಖರ ಹೆಗ್ಡೆ ಸ್ವಾಗತಿಸಿ, ಕಾರ್ಯದರ್ಶಿ ಜಯಂತಿ ಶೆಟ್ಟಿ ವರದಿ ವಾಚಿಸಿ, ಶಾರದಾ ಶೆಟ್ಟಿ ವಂದಿಸಿದರು.