ಬೆಂಗಳೂರು: ನವರಸ ನಾಯಕ, ರಾಜಕಾರಣಿ ಜಗ್ಗೇಶ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಕಾಲಿಗೆ ಏಟಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಡೆಯಲಾಗದ ಕಾರಣ, ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. ಇಂದಿನ ಕಾವೇರಿ ಹೋರಾಟದಲ್ಲಿ ತಾವ್ಯಾಕೆ ಭಾಗಿಯಾಗಿಲ್ಲ ಎಂಬುದರ ಕುರಿತು ತಿಳಿಸಿದ್ದಾರೆ.
L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ. 2 ವಾರಗಳ ಫಿಸಿಯೋ ಚಿಕಿತ್ಸೆ ಮತ್ತು ಬೆಡ್ರೆಸ್ಟ್ ಕಡ್ಡಾಯ ಎಂದು ಡಾಕ್ಟರ್ ಸಲಹೆ ನೀಡಿದ್ದಾರೆ ಎಂದು ಚಿಕಿತ್ಸೆ ಫೋಟೋ ಶೇರ್ ಮಾಡಿ ಅನಾರೋಗ್ಯದ ಬಗ್ಗೆ ಜಗ್ಗೇಶ್ ತಿಳಿಸಿದ್ದಾರೆ.

ಇತ್ತೀಚೆಗೆ ನಟ ಜಗ್ಗೇಶ್ಗೆ ಕಾಲುಮುರಿದುಕೊಂಡಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲು ಭಾಗಿಯಾಗಲು ಸಾಧ್ಯವಾಗಲಿಲ್ಲಾ!
2ವಾರ pysiyo ಚಿಕಿತ್ಸೆ ಹಾಗು bedrest ಕಡ್ಡಾಯ ಎಂದು ಡಾ ಸಲಹೆ ನೀಡಿದ್ದಾರೆ..
ನಿಮ್ಮ ಮಾಹಿತಿಗಾಗಿ ಧನ್ಯವಾದ
ಶುಭಸಂಜೆ🙏 pic.twitter.com/KZgGvVffj6— ನವರಸನಾಯಕ ಜಗ್ಗೇಶ್ (@Jaggesh2) September 29, 2023
