ಉಡುಪಿ: ಉಡುಪಿ ತಾಲೂಕು ಕಚೇರಿ ದಾಖಲೆಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ದಾಖಲೆಗಳನ್ನು ಹಿಂದಿನಿಂದಲೂ ಶೇಖರಿಸಿಡಲಾಗುತ್ತಿದೆ ದಿನಾಂಕ 15/08/2023 ರಿಂದ ದಿನಾಂಕ 26/09/2023 ರ ನಡುವೆ ಗಾಂಧಿ ಭವನದ ಒಳಗೆ ರ್ಯಾಕ್ಗಳಲ್ಲಿ ಜೋಡಿಸಿಟ್ಟಿದ್ದ ದಾಖಲೆಗಳನ್ನು ಯಾರೋ ಕಳ್ಳರು ಹಿಂಬದಿಯ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ನಟರಾಜ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.