ಚಂದನವನ : ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅಭಿನಯ, ಸಹಜ ಸೌಂದರ್ಯದಿಂದ ಗಮನ ಸೆಳೆದಿದ್ದ ನಟಿ ಜ್ಯೋತಿ ರೈ. ಇತ್ತೀಚೆಗೆ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ಗಮನ ಸೆಳೆಯುತ್ತಿದ್ದರು. ಈ ನಡುವೆ ಮೊನ್ನೆಯಷ್ಟೇ ಗುಡ್ ನ್ಯೂಸ್ ಕೊಡುವೆ ಎಂದೂ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಆ ಗುಡ್ ನ್ಯೂಸ್ ಏನು ಎಂಬುದನ್ನು ತಿಳಿಸಿದ್ದಾರೆ.
ಹೌದು, ಜ್ಯೋತಿ ರೈ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಎಂಗೇಜ್ಮೆಂಟ್ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ, ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಕಿರುತೆರೆ ನಟಿ ಜ್ಯೋತಿ ರೈ ಕೆಲವು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಈಗ ನಾಯಕಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಇನ್ನೆಂದಿಗೂ ನಾನು ಪೋಷಕ ಪಾತ್ರ ಮಾಡುವುದಿಲ್ಲ ಎಂದಿದ್ದಾರೆ.


ಕೆಲವು ದಿನಗಳಿಂದ ಸುದ್ದಿಯೇ ಇಲ್ಲದ ಜ್ಯೋತಿ ರೈ ಇದ್ದಕ್ಕಿದ್ದಂತೆ ಹಾಟ್ ಫೋಟೋಗಳ ಮೂಲಕ ಬಹಳ ಸುದ್ದಿಯಾಗಿದ್ದರು. ಜ್ಯೋತಿ ರೈ ಇದ್ದಕ್ಕಿದ್ದಂತೆ ಹೀಗೆ ಬದಲಾಗಿದ್ದು ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು. ಅಲ್ಲದೆ ಜ್ಯೋತಿ ರೈ ಪದೇ ಪದೆ ಯುವಕನೊಬ್ಬನೊಂದಿಗೆ ಇರುವ ಫೋಟೋ ನೋಡಿ ಅನುಮಾನ ವ್ಯಕ್ತಪಡಿಸಿದ್ದರು.
ಬಹುತೇಕ ಫೋಟೋಗಳಿಗೆ ಜ್ಯೋತಿ, ಕಾಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ. ಜ್ಯೋತಿ ರೈ ಮದುವೆ ಆಗಿದ್ದು ಒಬ್ಬ ಮಗ ಕೂಡಾ ಇದ್ದಾನೆ. ಆದರೆ ಮೊದಲ ಪತಿಯಿಂದ ಜ್ಯೋತಿ ದೂರಾವಾಗಿದ್ದರು. ಈ ನಡುವೆ ನಿರ್ದೇಶಕ ಸುಕು ಪೂರ್ವಜ್ ಜೊತೆ ಡೇಟಿಂಗ್ ಮಾಡುತ್ತಿರಬಹುದು ಎನ್ನಲಾಗಿತ್ತು. ಇದೀಗ ಸ್ವತ: ಜ್ಯೋತಿ ತಮ್ಮ ನಡುವಿನ ಸಂಬಂಧವನ್ನು ಖಚಿತ ಪಡಿಸಿದ್ದಾರೆ.
ಮಡಿಕೇರಿಯಲ್ಲಿ ಹುಟ್ಟಿದ ಜ್ಯೋತಿ ರೈ ಪುತ್ತೂರಿನಲ್ಲಿ ಓದಿ ಬೆಳೆದರು. ಸದ್ಯ ಈಗ ಹೈದರಾಬಾದ್ನಲ್ಲೇ ನೆಲೆಸಿದ್ದಾರೆ.
