Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಮನೆಯ ಬೀಗ ಮುರಿದು ಕಳವು

0

ಬ್ರಹ್ಮಾವರ : ಮನೆಯ ಬೀಗ ಮುರಿದು ಬೆಲೆ ಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ಯಡ್ತಾಡಿ ನಡೆದಿದೆ

ಎಚ್‌. ಕುಶಾಲ ಶೆಟ್ಟಿ ಇವರು ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಮನೆಯನ್ನು ನೋಡಿಕೊಳ್ಳಲು ಕೆಲಸದವಳು ಇದ್ದು ಅವರು ದಿನಾಲೂ ಬೆಳಿಗ್ಗೆ 8:30 ಗಂಟೆಗೆ ಮನೆಗೆ ಬಂದು ಸಂಜೆ 4:30 ಗಂಟೆಗೆ ಮನೆಗೆ ಬೀಗ ಹಾಕಿ ಅವರ ಮನೆಗೆ ಹೋಗುತ್ತಿದ್ದರು.

ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಮನೆಗೆ ಬಂದು ನೋಡಿದಾಗ ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು  ಮುರಿದು  ಮನೆಯಲ್ಲಿನ ಕಪಾಟಿನಲ್ಲಿದ್ದ ಸುಮಾರು 50 ಸಾವಿರ ಮೌಲ್ಯದ  6 ರೇಷ್ಮೆ ಸೀರೆಗಳು, ಸುಮಾರು 25 ಸಾವಿರ ಬೆಲೆ ಬಾಳುವ 2 ವಾಚುಗಳು ಮತ್ತು ಸುಮಾರು 15 ಸಾವಿರ ಮೌಲ್ಯದ  ಕ್ಯಾಮಾರವನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

Advertisement. Scroll to continue reading.

ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!