Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಅನಾಥಾಶ್ರಮದಲ್ಲಿ ವ್ಯಕ್ತಿ ಸಾವು; ವಾರೀಸುದಾರರ ಪತ್ತೆಗೆ ಮನವಿ

1

ವರದಿ : ಬಿ.ಎಸ್.ಆಚಾರ್ಯ


ಬ್ರಹ್ಮಾವರ : ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಉಡುಪಿ ಇವರ ಮನವಿ ಮೇರೆಗೆ ಅಸಹಾಯಕ ಸ್ಥಿತಿಯಲ್ಲಿ ಉಡುಪಿ ಕಲ್ಸಂಕ ಬಳಿ ಸಿಕ್ಕಿದ 68 ವರ್ಷದ ದೀನನಾಥ ಕೋಟ್ಯಾನ್ ರವರನ್ನು ಬ್ರಹ್ಮಾವರ ಅಪ್ಪ ಅಮ್ಮ ಅನಾಥಾಲಯಕ್ಕೆ ಜುಲೈ 8 ರಂದು ಸೇರಿಸಲಾಗಿತ್ತು.

ಅವರು ಹೃದಯ ಸಂಬಂಧಿ ಕಾಯಿಲೆಯಿಂದ ದಿನಾಂಕ ಅಕ್ಟೋಬರ್ 4 ರಂದು ಮೃತಪಟ್ಟಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Advertisement. Scroll to continue reading.

ಮೃತ ದೀನನಾಥ ರವರ ಮೃತ ದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಮೃತರ ರಕ್ತ ಸಂಬಂಧಿಕರು ಅಥವಾ ವಾರೀಸುದಾರರು ಇದ್ದಲ್ಲಿ ಯಾ ಚಿತ್ರದಲ್ಲಿ ಕಾಣುವ ವಯಸ್ಸಿನ ಹಾಗೂ ಬಟ್ಟೆ ಧರಿಸಿದ ಗಂಡಸು ತಮ್ಮ ಠಾಣಾ ಸರಹದ್ದಿನಲ್ಲಿ ಕಾಣೆಯಾಗಿದ್ದಲ್ಲಿ ಬ್ರಹ್ಮಾವರ ಪೊಲೀಸು ಠಾಣೆಯ 0820-2561044 ಅಥವಾ ವೃತ್ತ ಕಛೇರಿ 0820- 2561966 ಸಂಪರ್ಕಿಸುವಂತೆ ಕೋರಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!