ಕೋಲಾರ: ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕತ್ತು ಸೀಳಿಕೊಂಡಿರುವ ಆಘಾತಕಾರಿ ಘಟನೆ ಬುಧವಾರ ಕೋಲಾರದಲ್ಲಿ ನಡೆದಿದೆ.
ಬೇತಮಂಗಲ ನಿವಾಸಿ 35 ವರ್ಷದ ರಹಮತ್ ಉಲ್ಲಾ ಬೇಗ್ ಮೃತಪಟ್ಟವರು.
ಪೊಲೀಸರ ಪ್ರಕಾರ, ಆರೋಪಿಯು ಜೀವನೋಪಾಯಕ್ಕಾಗಿ ಗ್ಯಾಸ್ ಸ್ಟೌವ್ಗಳನ್ನು ರಿಪೇರಿ ಮಾಡುತ್ತಿದ್ದ. ಅಲ್ಲದೇ, ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
Advertisement. Scroll to continue reading.

ಕಿಕ್ಕಿರಿದು ತುಂಬಿದ್ದ ಇಟಿಸಿಎಂ ಸರ್ಕಲ್ನಲ್ಲಿ ರಹಮತ್ ತನ್ನ ಕತ್ತು ಸೀಳಿಕೊಂಡಿದ್ದಾರೆ.
ಸಾರ್ವಜನಿಕರು ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಕೋಲಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
Advertisement. Scroll to continue reading.
