ಬ್ರಹ್ಮಾವರ : ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ದೇವಣ್ಣ ನಾಯ್ಕ(49) ಮೃತ ದುರ್ದೈವಿ
ಭಾನುವಾರ ದೇವಣ್ಣ ಅವರ ಮನೆಯಲ್ಲಿ ಕದಿರು ಕಟ್ಟುವ ಹಬ್ಬವಿತ್ತು. ಹೀಗಾಗಿ ಅವರು ಮನೆಯ ಎದುರು ಇರುವ ಗದ್ದೆಗೆ ಕದಿರು ತರಲು ಹೋಗಿದ್ದಾರೆ. ಈ ವೇಳೆ ತೋಟದಲ್ಲಿದ್ದ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.