Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಮುಂದಿನ ಬಜೆಟ್‌ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ

1

ಉಡುಪಿ: ಮುಂದಿನ‌ ಬಜೆಟ್‌ನಲ್ಲಿ ಬಂಟರ ಅಭಿವೃದ್ದಿ ನಿಗಮ ಸ್ಥಾಪನೆಯನ್ನು ಘೋಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಶನಿವಾರ ಜಾಗತಿಕ ಬಂಟರ‌ ಸಂಘಗಳ ಒಕ್ಕೂಟವು ಇಲ್ಲಿನ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಶ್ವ ಬಂಟರ ಸಮ್ಮೇಳನ 2023 ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದ ಬಂಟರು ಇತ್ತೀಚಿನ ವರ್ಷದಲ್ಲಿ, ಉದ್ಯಮ‌ ಸ್ಥಾಪಿಸಲು ಹಾಗೂ ಉದ್ಯೋಗ ಹುಡುಕಿ ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಹೋಗಿದ್ದಾರೆ.‌ ಹಾಗಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ ಸಮುದಾಯದವರನ್ನು ಜಗತ್ತಿನ ಅನೇಕ ಪ್ರದೇಶಗಳಲ್ಲಿ ನೋಡಲು ಸಾಧ್ಯ ಎಂದರು.

Advertisement. Scroll to continue reading.

ಬಂಟರ‌ದು ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಹೊಂದಿದ ಸಮಾಜ‌.‌ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ, ಉದ್ಯಮ, ಕ್ರೀಡೆ, ಹೋಟೆಲ್‌ ಹಾಗೂ ಇತರ ಉದ್ಯಮ, ಸಿನಿಮಾ ಕ್ಷೇತ್ರಗಳಲ್ಲಿ ಬಂಟ ಜನಾಂಗದ ಬಹಳಷ್ಟು ಸಾಧಕರನ್ನು ನೋಡಲು ಸಾಧ್ಯ.‌ ಎಲ್ಲ ಕ್ಷೇತ್ರಗಳಲ್ಲೂ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ’ ಎಂದರು.

‘ಎಲ್ಲೇ ಹೋಗಿ ನೆಲೆಸಿದ್ದರೂ ಕರಾವಳಿಯ ಸಂಸ್ಕೃತಿ, ಪರಂಪರೆಯನ್ನು ಬಂಟರು ಮರೆತಿಲ್ಲ ಎಂಬುದು ಮುಖ್ಯ ಇಬ್ಬರು ಮಂಗಳೂರಿನವರು ಭೇಟಿಯಾದರೆ ತುಳುವಿನಲ್ಲೇ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಭಾಷೆಯನ್ನು ಇಲ್ಲಿನವರು ಪ್ರೀತಿಸಿ ಗೌರವಿಸುತ್ತಾರೆ. ಪ್ರತಿಯೊಬ್ಬರೂ ಅವರ ಮಾತೃ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಮಾತೃಭಾಷೆಗೆ ಮೊದಲ ಗೌರವ ಸಲ್ಲಬೇಕು’ ಎಂದರು.

ಬಂಟರ‌ದು ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಹೊಂದಿದ ಸಮಾಜ‌.‌ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ, ಉದ್ಯಮ, ಕ್ರೀಡೆ, ಹೋಟೆಲ್‌ ಹಾಗೂ ಇತರ ಉದ್ಯಮ, ಸಿನಿಮಾ ಕ್ಷೇತ್ರಗಳಲ್ಲಿ ಬಂಟ ಜನಾಂಗದ ಬಹಳಷ್ಟು ಸಾಧಕರನ್ನು ನೋಡಲು ಸಾಧ್ಯ.‌ ಎಲ್ಲ ಕ್ಷೇತ್ರಗಳಲ್ಲೂ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ’ ಎಂದರು.

‘ಎಲ್ಲೇ ಹೋಗಿ ನೆಲೆಸಿದ್ದರೂ ಕರಾವಳಿಯ ಸಂಸ್ಕೃತಿ, ಪರಂಪರೆಯನ್ನು ಬಂಟರು ಮರೆತಿಲ್ಲ ಎಂಬುದು ಮುಖ್ಯ ಇಬ್ಬರು ಮಂಗಳೂರಿನವರು ಭೇಟಿಯಾದರೆ ತುಳುವಿನಲ್ಲೇ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಭಾಷೆಯನ್ನು ಇಲ್ಲಿನವರು ಪ್ರೀತಿಸಿ ಗೌರವಿಸುತ್ತಾರೆ. ಪ್ರತಿಯೊಬ್ಬರೂ ಅವರ ಮಾತೃ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು. ಮಾತೃಭಾಷೆಗೆ ಮೊದಲ ಗೌರವ ಸಲ್ಲಬೇಕು’ ಎಂದು ಕರೆ ನೀಡಿದರು.

‘ನಾವೆಲ್ಲರೂ ಕನ್ನಡಿಗರು.‌ ಕನ್ನಡ ಭಾಷೆ ಸಂಸ್ಕೃತಿ ಪರಂಪರೆಯನ್ನು ಬೇರೆ ದೇಶಗಳಲ್ಲೂ ಬಿತ್ತಬೇಕು.‌ ಬಂಟರು ಜಗತ್ತಿನ ವಿವಿಧ ಕಡೆ ಕನ್ನಡ ಸಂಘಟನೆ‌ಗಳನ್ನು ಕಟ್ಟಿಕೊಂಡು ಈ ನೆಲದ ಸಂಸ್ಕೃತಿ ಪರಂಪರೆ ಪಸರಿಸುತ್ತಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ’ ಎಂದರು.

‘ಬಂಟರದು ಜಾತ್ಯತೀತ ಸಮುದಾಯ. ಜಾತಿ ಧರ್ಮ, ಭಾಷೆ ಎಂದು ತಾರತಮ್ಯ ಮಾಡದೆಯೇ ಎಲ್ಲರನ್ನೂ ಮನುಷ್ಯರಂತೆ ನೋಡುವ ಪ್ರವೃತ್ತಿ ಹೊಂದಿದವರು. ನಾವು ಮೊದಲು ಮನುಷ್ಯರನ್ಜು ಪ್ರೀತಿಸುವುದನ್ನು, ಗೌರವಿಸುವುದನ್ನು ಕಲಿತುಕೊಳ್ಳಬೇಕಿದೆ. ದ್ವೇಷಿಸುವ ಪ್ರವೃತ್ತಿ ಒಳ್ಳೆಯದಲ್ಲ‌. ಮನುಷ್ಯತ್ವ ಮೊದಲು, ಬದುಕು ಆಮೇಲೆ. ವಿಶ್ವ‌ಮಾನವರಾಗಿ ಹುಟ್ಟಿದವರು ಸಮಾಜದ ಪ್ರಭಾವದಿಂದ ಅಲ್ಪ‌ಮಾನವರಾಗುತ್ತಾರೆ‌ ಎಂದು ಕುವೆಂಪು ಹೇಳಿದ್ದಾರೆ. ಎಲ್ಲರೂ ವಿಶ್ವ‌ಮಾನವರಾಗಲು ಸಾಧ್ಯ ಆಗದೇ ಇರಬಹುದು. ಆದರೆ ಆ ದಾರಿಯಲ್ಲಿ ಸಾಗಲು ಪ್ರಾಮಾಣಿಕ ಪ್ರಯತ್ನ‌ಮಾಡಬೇಕು. ಇದು ಅತ್ಯಂತ ಅವಶ್ಯ’ ಎಂದರು.

Advertisement. Scroll to continue reading.

ಜಗತ್ತಿನ ಅನೇಕ‌ ಭಾಗಗಳಲ್ಲಿ ಬದುಕು ನಡೆಸುವ ಬಂಟರ ಅಲ್ಲಿನ‌ ಜನರ‌ ಸ್ನೇಹ, ಪ್ರೀತಿ ಗಳಿಸಿದ್ದಾರೆ. ಇದೂ ನಿಮ್ಮ ಜಾತ್ಯತೀತ ವ್ಯಕ್ತಿತ್ವಕ್ಕೆ ಕನ್ನಡಿ. ಈ ಸಮ್ಮೇಳನದಲ್ಲಿ ಬಂಟರ ಅಭಿವೃದ್ಧಿ ಮತ್ತು ಸಂಘಟನೆ ಬಗ್ಗೆ ಚರ್ಚಿಸುವಾಗ ಇಂತಹ ವಿಚಾರಗಳ ಬಗ್ಗೆಯೂ ಚರ್ಚಿಸಿ’ ಎಂದು ಹೇಳಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಜಿ ಸಚಿವ ರಮಾನಾಥ ರೈ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ , ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಡಾ.ಪಿ.ವಿ.ಶೆಟ್ಟಿ, ಸಂತೋಷ್ ಗುರು, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!