ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಗೊಂಡು 50 ವರ್ಷದ ಸಂಭ್ರಮಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆಗೆ ಸರಕಾರ ನೀಡಿದ ಮೊದಲ ಕಾರ್ಯಕ್ರಮಕ್ಕೆ ಬ್ರಹ್ಮಾವರ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮನೆ, ಕಛೇರಿಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದಿಂದ ರಂಗವಲ್ಲಿಯಲ್ಲಿ ರಾಜ್ಯದ ಚಿತ್ರ ಮತ್ತು ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ ಘೋಷ ವಾಕ್ಯಕ್ಕೆ ಇಲ್ಲಿನ ಹಲವಾರು ಗ್ರಾಮ ಪಂಚಾಯತಿ ಕಛೇರಿಗಳು ಸಂಭ್ರಮದಿಂದ ಆಚರಿಸಿದೆ.
Advertisement. Scroll to continue reading.

ಬ್ರಹ್ಮಾವರ ತಾಲೂಕು ಕಛೇರಿಯ ಸಿಬ್ಬಂದಿಗಳು, ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಂಗವಲ್ಲಿಯ ರಚನೆಗೆ ತೊಡಗಿಸಿಕೊಂಡು ಸಂಜೆ ರಂಗವಲ್ಲಿಗೆ ಹಣತೆಯ ಬೆಳಕಿನ ಮೆರಗು ನೀಡಿದ್ದಾರೆ.
ರಾಜ್ಯ ಸರಕಾರದ ಆದೇಶದ ಬಹುತೇಕ ಕಾರ್ಯಕ್ರಮಗಳ ಕನ್ನಡ ರಾಜ್ಯೋತ್ಸವನ್ನು ಬ್ರಹ್ಮಾವರ ಭಾಗದಲ್ಲಿ ಆಚರಣೆ ಮಾಡುವಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸಂಜೆ ತನಕ ಶ್ರಮಿಸಿ ಕಾರ್ಯಕ್ರಮ ಅನುಷ್ಠಾನ ಮಾಡಿದೆ.
Advertisement. Scroll to continue reading.

In this article:brahmavara, Diksoochi news, Kannada rajyothsava, rangoli, ಕನ್ನಡ ರಾಜ್ಯೋತ್ಸವ

Click to comment