ಕೋಟ : ಕಾಲೇಜು ಆಡಳಿತ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆದು ಠಾಣೆ ಮೆಟ್ಟಿಲೇರಿದ್ದು, ಈ ನಡುವೆ ಕಾಲೇಜಿನ ಪಠ್ಯ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಬ್ರಹ್ಮಾವರದ ಕಾಲೇಜೊಂದರಲ್ಲಿ ಸಂಭವಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಾಲೇಜು ಆಡಳಿತ ನನಗೆ ಸೇರಿದ್ದು ಎಂದು ಆಡಳಿತ ಟ್ರಸ್ಟ್ ನ ಮುಖ್ಯಸ್ಥರಾದ ಪತಿ- ಪತ್ನಿ ಜಗಳದಲ್ಲಿ ತೊಡಗಿದ್ದು ಟ್ರಸ್ಟ್ನ ಹಣ ದುರುಪಯೋಗ ಮಾಡಲಾಗಿದೆ ಎಂದು ಪತ್ನಿ ದೂರು ನೀಡಿದ್ದರು.
Advertisement. Scroll to continue reading.

ಈ ಎಲ್ಲಾ ಸಮಸ್ಯೆಗಳಿಂದ ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗಿತ್ತು. ಪ್ರತಿಭಟನೆ ಸಂದರ್ಭ ಕಾಲೇಜು ವಠಾರದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಯಿತು. ಮಧ್ಯಪ್ರವೇಶಿಸಿದ ಕೋಟ ಪೊಲೀಸರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
In this article:achlady, brahmavara, Diksoochi news, ECR college, saybrakatte, ಗಲಾಟೆ

Click to comment