ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಬಳಿಯ ಬಂಡೀಮಠ ಪರಿಸರದಲ್ಲಿ ಕೆಲವು ದಿನದಿಂದ ಸಾರ್ವಜನಿಕರಿಗೆ ತೀರಾ ಭಯ ಹುಟ್ಟಿಸಿದ ಚಿರತೆ ಭಾನುವಾರ ನಸುಕಿನಲ್ಲಿ ಅರಣ್ಯ ಇಲಾಖೆಯವರು ಇರಿಸಲಾಗಿದ್ದ ಬೋನಿಗೆ ಬಿದ್ದಿದೆ.
ಇಲ್ಲಿನ ರಸ್ತೆ ಬದಿಯಲ್ಲಿರುವ ರವಿಯವರ ಮನೆಯ ಬಳಿ ಅರಣ್ಯ ಇಲಾಖೆಯವರು 3 ದಿನದ ಹಿಂದೆ ಬೋನನ್ನು ಇರಿಸಲಾಗಿದ್ದು, ಶನಿವಾರ ಸಂಜೆ ರವಿಯವರು ಮನೆಯ ಕೋಳಿಯೊಂದನ್ನು ಬೋನಿಗೆ ಹಾಕಿದ್ದರು.


ಆಹಾರದ ಆಸೆಗೆ ಬಂದ 5 ವರ್ಷದ ಗಂಡು ಚಿರತೆ ರಾತ್ರಿ 2 ಗಂಟೆ ಸಮಯಕ್ಕೆ ಬೋನಿನಲ್ಲಿ ಸಿಲುಕಿ ಕೊಂಡಿದೆ. ಸುದ್ದಿ ತಿಳಿದ ಉಪವಲಯ ಅರಣ್ಯಾಧಿಕಾರಿ ಹರೀಶ್ ಕೆ ಇಲಾಖೆಯ ಮೇಲಧಿಕಾರಿಗಳಿಗೆ ಗಮನಕ್ಕೆ ತಂದಿದ್ದರು.
ಆರ್ ಎಫ್ ಓ ವಾರಿಜಾಕ್ಷಿ ಅವರು ಘಟನೆಯ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ವನ ಪಾಲಕರು ಸಿಬ್ಬಂದಿಗಳಾದ ಸುರೇಶ್, ವಿತೇಶ್, ರಮೇಶ್, ಅಭಿಲಾಷ್, ಮಂಜುನಾಥ್ , ಮನೀಶ್, ಸುರೇಶ್ ದೇವಾಡಿಗ, ಲಕ್ಷ್ಮಣ್, ಅಶ್ವಿನ್ , ಹರೀಶ್ ಸಾರ್ವಜನಿಕರ ನೆರವಿನಿಂದ ಮತ್ತೊಂದು ಬೋನಿಗೆ ಹಾಕಿ ಚಿರತೆಯನ್ನು ಪಶ್ವಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಿಡಲಾಗಿದೆ.
ಚಿರತೆ ಬೋನಿಗೆ ಬಿದ್ದ ಸುದ್ದಿ ತಿಳಿದು ತಂಡೊಂಪತಂಡವಾಗಿ ಬಂದ ಗ್ರಾಮದ ಜನರು ಕೆಲವು ದಿನದಿಂದ ತೀರಾ ಭಯ ಬೀತರಾಗಿದ್ದು ಇಂದು ಅತಂಕ ದೂರವಾಗಿದೆ.