ಕಾರ್ಕಳ : ಪತಿಯ ಕಿರುಕುಳ ತಾಳಲಾರದೆ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರ್ಗಾನದಲ್ಲಿ ನಡೆದಿದೆ. ಅಶ್ವಿನಿ(೨೬) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಒಂದೂವರೆ ವರ್ಷದ ಹಿಂದೆ ನೆಲ್ಲಿಕಟ್ಟೆ ನಿವಾಸಿ ಮನೋಜ್ ಎಂಬಾತನೊAದಿಗೆ ಅಶ್ವಿನಿ ವಿವಾಹ ಮಾಡಿಕೊಡಲಾಗಿತ್ತು.
ಮದುವೆಯಾದ ಬಳಿಕ ಅಶ್ವಿನಿಯು ಗಂಡನ ಮನೆಯಲ್ಲಿ ಇದ್ದು ೨-೩ ಬಾರಿ ತಾಯಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಮನೆಗೆ ಬಂದಾಗ ಮನೋಜ್ ತನಗೆ ಹೊಡೆದು ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದರು.
ಅಲ್ಲದೇ, ಪದೇ ಪದೇ ಕಿರುಕುಳ ನೀಡಿ ನಿನ್ನ ಜೊತೆ ಬಾಳಲು ನನಗೆ ಇಷ್ಟ ಇರುವುದಿಲ್ಲ, ನೀನು ಎಲ್ಲಿಯಾದರೂ ಹೋಗಿ ಸಾಯಿ ಎಂದು ಬೈಯುತ್ತಿರುವ ವಿಚಾರವನ್ನು ಹೇಳಿದ್ದರು ಎನ್ನಲಾಗಿದೆ. ಇದರಿಂದಾಗಿ ಗುರುವಾರ ಆಕೆ ನೇಣಿಗೆ ಶರಣಾಗಿದ್ದಾರೆ ಎಂದು ಅಶ್ವಿನಿ ಅಕ್ಕ ಸವಿತಾ ನೀಡಿರುವ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:death, Diksoochi news, diksoochi udupi, harassment, hebri, hirgana, karavali news, karkala, nellikatte, Sucide case, Udupi

Click to comment