ಕಾಸರಗೋಡು : ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆಯೇ ಚಿಕ್ಕಪ್ಪನ ಕಾರು ಹರಿದು ಒಂದೂವರೆ ವರ್ಷದ ಕಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಸೋಂಕಾಲ್ ಎಂಬಲ್ಲಿ ಈ ದುರಂತ ಸಂಭವಿಸಿದೆ.
ಸೋಂಕಾಲ್ ಕೊಡಂಗೆಯ ನಿಸಾರ್ ರವರ ಪುತ್ರ ಮಸ್ತುಲ್ ಜಿಶಾನ್ ಮೃತ ಪಟ್ಟ ಬಾಲಕ.
Advertisement. Scroll to continue reading.

ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.
ದೊಡ್ದ ಮಗು ಸೈಕಲ್ನ್ನು ಬದಿಗೆ ಇಡುತ್ತಿತ್ತು. ಈ ವೇಳೆ ಚಿಕ್ಕಪ್ಪನ ಕಾರು ಆಗಮಿಸಿದೆ. ಪುಟ್ಟ ಮಗು ಅಂಗಳದಲ್ಲಿ ಕಾರನ್ನು ನೋಡುತ್ತಾ ನಿಂತಿದೆ. ಕಾರು ನಿಲ್ಲಿಸುತ್ತಿದ್ದ ಚಿಕ್ಕಪ್ಪನಿಗೆ ಮಗು ನಿಂತಿದ್ದು ಕಾಣಿಸಿಲ್ಲ.
ಈ ವೇಳೆ ಕಾರಿನ ಮುಂದಿನ ಚಕ್ರಕ್ಕೆ ಸಿಲುಕಿ ಮಗು ಸಾವನ್ನಪ್ಪಿದೆ. ಮಗು ಕಾರಿನಡಿ ಸಿಲುಕುತ್ತಿದ್ದಂತೆ ದೊಡ್ಡ ಮಗು ಮಗುವನ್ನು ಎಳೆದು ಎತ್ತಿಕೊಂಡಿದೆ. ಆದರೆ ಅಷ್ಟರಲ್ಲೇ ಮಗು ಸಾವನ್ನಪ್ಪಿತ್ತು.
ಮನೆಯ ಸಿಸಿ ಕ್ಯಾಮರಾದಲ್ಲಿ ಈ ಮನಕಲಕುವ ದೃಶ್ಯ ಸೆರೆಯಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.

In this article:child death, death, Diksoochi news, Featured, Kasaragood, kerala, sonkal, uppala, ಮಗು ಸಾವು

Click to comment