ಪ್ರಯಾಗ್ರಾಜ್ : ಟಿಕೆಟ್ ದರದ ವಿಚಾರವಾಗಿ ನಡೆದ ಜಗಳ ಹಲ್ಲೆಯ ಮಟ್ಟಕ್ಕೇರಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಟಿಕೆಟ್ ದರದ ವಿಚಾರವಾಗಿ ಕಂಡೆಕ್ಟರ್ ಹಾಗೂ ವಿದ್ಯಾರ್ಥಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ವಿದ್ಯಾರ್ಥಿ ಕಂಡೆಕ್ಟರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಲಾರೆಬ್ ಹಶ್ಮಿ (20) ಹಲ್ಲೆ ನಡೆಸಿದ ವಿದ್ಯಾರ್ಥಿ. ಹರಿಕೇಶ್ ವಿಶ್ವಕರ್ಮ (24) ಗಂಭೀರವಾಗಿ ಗಾಯಗೊಂಡಿರುವ ಬಸ್ ಕಂಡಕ್ಟರ್.
ಶುಕ್ರವಾರ ಬೆಳಿಗ್ಗೆ ವಾಗ್ವಾದ ನಡೆದಿದೆ. ಈ ವೇಳೆ ನಡೆದಿದೆ ಎಂದು ಪ್ರಯಾಗ್ರಾಜ್ ಪೆÇಲೀಸರು ತಿಳಿಸಿದ್ದಾರೆ.
ಕಂಡಕ್ಟರ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಆರೋಪಿ ತನ್ನ ಅಪರಾಧವನ್ನು ವಿಡಿಯೋ ಒಂದರಲ್ಲಿ ಒಪ್ಪಿಕೊಂಡಿದ್ದಾನೆ. ಅದರಲ್ಲಿ ಆತ, ಪ್ರವಾದಿ ಮಹಮ್ಮದ್ರನ್ನು ಅವಮಾನಿಸಿದ್ದಕ್ಕಾಗಿ ಕಂಡಕ್ಟರ್ ಮೇಲೆ ದಾಳಿ ನಡೆಸಿದ್ದಾಗಿ ಹೇಳಿದ್ದಾನೆ.
ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಪೆÇಲೀಸರು ಎನ್ಕೌಂಟರ್ನಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಹಶ್ಮಿ, ಕಸಾಯಿಖಾನೆಗಳಲ್ಲಿ ಮಾಂಸ ಕತ್ತರಿಸಲು ಬಳಸುವ ಕತ್ತಿಯಿಂದ ಹರಿಕೇಶ್ ವಿಶ್ವಕರ್ಮ ಮೇಲೆ ಭೀಕರ ಹಲ್ಲೆ ನಡೆಸಿದ್ದಾನೆ. ಹರಿಕೇಶ್ ಅವರ ಕುತ್ತಿಗೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.
ದಾಳಿ ನಡೆಸಿದ ಹಶ್ಮಿ, ಬಳಿಕ ಬಸ್ನಿಂದ ಕೆಳಕ್ಕೆ ಹಾರಿ, ಅಡಗಿಕೊಳ್ಳಲು ಕಾಲೇಜ್ ಕ್ಯಾಂಪಸ್ ಒಂದಕ್ಕೆ ನುಗ್ಗಿದ್ದ. ಕಾಲೇಜು ಆವರಣದಲ್ಲಿ ಹಶ್ಮಿ ವಿಡಿಯೋವೊಂದನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಆತ ತಾನು ಎಸಗಿದ ಕೃತ್ಯವನ್ನು ಒಪ್ಪಿಕೊಂಡಿದ್ದು, ಬಸ್ ಕಂಡಕ್ಟರ್ ಧರ್ಮನಿಂದನೆ ಹಾಗೂ ‘ಪ್ರವಾದಿ ಮಹಮ್ಮದ್ಗೆ ಅವಮಾನ’ ಮಾಡಿದ್ದರು ಎಂದು ಆರೋಪಿಸಿದ್ದಾನೆ.
ತಾನು ಕಂಡಕ್ಟರ್ ಮೇಲೆ ಹಲ್ಲೆಗ ಬಳಸಿದ ಕತ್ತಿಯನ್ನು ಆತ ಝಳಪಿಸಿ ವಿಡಿಯೋದಲ್ಲಿ ತೋರಿಸಿದ್ದಾನೆ. “ಆತ ಮುಸ್ಲಿಮರನ್ನು ನಿಂದಿಸಿದ. ಅದಕ್ಕಾಗಿ ನಾನು ಆತನ ಮೇಲೆ ದಾಳಿ ನಡೆಸಿದೆ. ಇನ್ಶಾ ಅಲ್ಲಾ, ಆತ ಖಂಡಿತವಾಗಿಯೂ ಸಾಯುತ್ತಾನೆ” ಎಂದಿದ್ದಾನೆ. ಆರೋಪಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೆಸರನ್ನು ವಿಡಿಯೋದಲ್ಲಿ ಪ್ರಸ್ತಾಪಿಸಿರುವುದು ಕೇಳಿಸಿದೆ.
ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೈಯಲ್ಲಿ ಕತ್ತಿ ಹಿಡಿದ ಹಶ್ಮಿ ಬಸ್ನಿಂದ ಹೊರಗೆ ಓಡುತ್ತಿರುವುದು ಇದರಲ್ಲಿ ಕಾಣಿಸಿದೆ. ಬೇರೆ ವಾಹನದಲ್ಲಿದ್ದ ಯಾರೋ ಇದನ್ನು ಚಿತ್ರೀಕರಿಸಿದ್ದಾರೆ.
ಬಸ್ನಲ್ಲಿ ಇದ್ದಕ್ಕಿದ್ದಂತೆ ಗಲಾಟೆ ಸದ್ದು ಕೇಳಿಸಿತು. ನಾನು ಬಸ್ ನಿಲ್ಲಿಸಿದೆ. ಗಾಯಗೊಂಡಿದ್ದ ವಿಶ್ವಕರ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ” ಎಂದು ಚಾಲಕ ಮಂಗ್ಲಾ ಯಾದವ್ ತಿಳಿಸಿದ್ದಾರೆ.

ಎನ್ಕೌಂಟರ್ನಲ್ಲಿ ಬಂಧನ :
ಘಟನೆ ಬಳಿಕ ಕಾರ್ಯಾಚರಣೆ ನಡೆಸಿದ ಪ್ರಯಾಗ್ರಾಜ್ ಪೆÇಲೀಸರು, ಕಾಲೇಜು ಆವರಣದಲ್ಲಿ ಅಡಗಿಕೊಂಡಿದ್ದ ಹಶ್ಮಿಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲು ಆತನನ್ನು ಪೆÇಲೀಸರ ತಂಡ ಕರೆದೊಯ್ದಾಗ, ಪೆÇಲೀಸರ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಪೆÇಲೀಸರು ಗುಂಡು ಹಾರಿಸಿದ್ದು, ಆತನ ಕಾಲಿಗೆ ಗುಂಡೇಟಿನ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಐಪಿಸಿಯ ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ವಿಚಾರಣೆ ನಡೆಯುತ್ತಿದೆ” ಎಂದು ಪ್ರಯಾಗ್ರಾಜ್ನ ಯಮುನಾನಗರದ ಡಿಸಿಪಿ ಅಭಿನವ್ ತ್ಯಾಗಿ ಹೇಳಿದ್ದಾರೆ.
ಆರೋಪಿ ಹಶ್ಮಿ ನಗರದ ಯುನೈಟೆಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು, ಹಾಜಿಗಂಜ್ ಪ್ರದೇಶದಲ್ಲಿ ವಾಸವಾಗಿದ್ದಾನೆ. ಆತನ ತಂದೆ ಮೊಹಮ್ಮದ್ ಯೂನಸ್ ನಗರದಲ್ಲಿ ಪೌಲ್ಟ್ರಿ ಫಾರಂ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Lareb Hashmi a BTech student in Prayagraj tried to molest & attack a Hindu girl. Harikesh Vishwakarma a bus conductor tried to protect the girl. Hashmi attacked Vishwakarma with a chopper and ran away. He later posted a video to give religious color to the murder & also get… pic.twitter.com/EoDiJFm9ro— Pramod Kumar Singh (@SinghPramod2784) November 24, 2023
