Connect with us

Hi, what are you looking for?

Diksoochi News

ಕರಾವಳಿ

ಬೈಂದೂರು : ರಸ್ತೆ ಬದಿ ಗೋಡೆಗೆ ಬೈಕ್ ಡಿಕ್ಕಿ; ಶಿಕ್ಷಕ ಸಾವು

0

ಬೈಂದೂರು : ಬೈಕ್ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಬೈಂದೂರು ಸಾಯಿ ಕಾಂಪ್ಲೆಕ್ಸ್ ಬಳಿ ಗುರುವಾ ಸಂಜೆ ವೇಳೆ ಸಂಭವಿಸಿದೆ.

ತೊಂಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ, ಮಯ್ಯಾಡಿ ನಿವಾಸಿ ಗೋವಿಂದ ರಾಯ(57) ಮೃತಪಟ್ಟವರು. ಇವರು ಬೈಂದೂರು ನ್ಯೂ ಬಸ್ ನಿಲ್ದಾಣದ ಕಡೆಯಿಂದ ಬೈಂದೂರು ಪೇಟೆ ಕಡೆಗೆ ಸರ್ವಿಸ್ ರಸ್ತೆಯಲ್ಲಿ ರವಿರಾಜ್ ಮಾಸ್ಟರ್ ಎಂಬವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದು, ಈ ವೇಳೆ ಬೈಕ್‌ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಈ ವೇಳೆ ಅವರನ್ನು ಎತ್ತಿ ಉಪಚರಿಸಲಾಯಿತಾದರೂ ಗೋವಿಂದ ರಾಯರು ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಬೈಕಿನಿಂದ ಬಿದ್ದು ಗಾಯ ಗೊಂಡು ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

Advertisement. Scroll to continue reading.

ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!