ಹಿರಿಯಡ್ಕ : ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಪಟ್ಟಿಬಾವುವಿನಲ್ಲಿ ನಡೆದಿದೆ.
ಅಜಯ್(21) ಮೃತ ದುರ್ದೈವಿ.
ಅಜಯ್ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದು, ತನ್ನ ಸ್ನೇಹಿತರೊಂದಿಗೆ ಭಾನುವಾರ ಬೈರಂಪಳ್ಳಿ ಗ್ರಾಮದ ಕೆ ಸಿ ರೋಡ್ ಗೆ ವಾಲಿಬಾಲ್ ಆಡಲೆಂದು ಹೋಗಿದ್ದರು.
Advertisement. Scroll to continue reading.
ವಾಲಿಬಾಲ್ ಆಟ ಆಡಿದ ನಂತರ ಅಜಯ್ ಹಾಗೂ ಆತನ ಸ್ನೇಹಿತರು ಪಟ್ಟಿಬಾವು ಹೊಳೆಯ ಬಳಿ ಸ್ನಾನ ಮಾಡಲೆಂದು ಹೋಗಿದ್ದಾರೆ. ಈ ವೇಳೆ ಹೊಳೆಯಲ್ಲಿ ಈಜಲು ಇಳಿದ ಅಜಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.