ಹೊಸಕೋಟೆ : ವೈಕುಂಠ ಏಕಾದಶಿ ಮತ್ತು ಹನುಮ ಜಯಂತಿ ದಿನದಂದು ವಿವಿಧ ದೇಗುಲಗಳಲ್ಲಿ ಪ್ರಸಾದ ಸೇವಿಸಿದ್ದ ಸುಮಾರು ೨೫೦ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಸಂಭವಿಸಿದೆ.
ಸಿದ್ಧಗAಗಮ್ಮ (೬೫) ಮೃತ ಮಹಿಳೆ.
ನಗರದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೂ ಹಲವಾರು ಮಂದಿ ವಾಂತಿ ಭೇದಿಯಿಂದ ಬಳಲಿ ನಗರದ ಸರಕಾರಿ ಮತ್ತು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

೩೬ ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ. ಇತರೆ ೯೭ ಮಂದಿಯ ಮೇಲೆ ಹೆಚ್ಚಿನ ನಿಗಾವಹಿಸಲಾಗಿದ್ದು, ಕೆಲವರು ಗುಣಮುಖರಾಗಿಯೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಗಾಣಿಗರ ಪೇಟೆಯ ಲಕ್ಷ್ಮಿನಾರಾಯಣ ದೇವಾಲಯ, ಮುಡಲ ಬಾಗಿಲು ಆಂಜನೇಯ ಸ್ವಾಮಿ, ಖಿಲ್ಲೆಆಂಜನೇಯ ಸ್ವಾಮಿ ಇತ್ಯಾದಿ ದೇಗುಲಗಳಲ್ಲಿ ಲಡ್ಡು, ಅವಲಕ್ಕಿ, ಚಿತ್ರಾನ್ನ, ಪುಳಿಯೊಗರೆ ಸೇರಿದಂತೆ ವಿವಿಧ ಸಿಹಿ ತಿಂಡಿಗಳನ್ನು ಪ್ರಸಾದದ ರೂಪದಲ್ಲಿಭಕ್ತರಿಗೆ ನೀಡಲಾಗಿತ್ತು. ಸುಮಾರು ೧೫ ಸಾವಿರಕ್ಕೂ ಹೆಚ್ಚು ಭಕ್ತರು ಎರಡು ಕರ್ಯಕ್ರಮಗಳಲ್ಲಿಭಾಗವಹಿಸಿದ್ದರು. ಘಟನೆಗೆ ಕಾರಣ ತನಿಖೆಯಿಂದಷ್ಟೇ ತಿಳಿಯಬೇಕಿದೆ.
