‘ನಾತಿಚರಾಮಿ’, ‘ಆಕ್ಟ್: 1978’ ಸಿನಿಮಾ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಹಾಗೂ ಅಖಿಲಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಖಿಲಾ ಅವರು ಮಂಸೋರೆ ವಿರುದ್ಧ
ದೂರು ಸಲ್ಲಿಸಿದ್ದು, ಇದಕ್ಕೆ ಮಂಸೋರೆ ಕೂಡ ಪ್ರತಿ ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ :
ತವರು ಮನೆಯಿಂದ ವರದಕ್ಷಿಣೆ ತರುವಂತೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಗಂಡ ಎಸ್ ಮಂಜುನಾಥ್ ( ಮಂಸೋರೆ ), ಅತ್ತೆ ವೆಂಕಟಲಕ್ಷ್ಮಮ್ಮ ಮತ್ತು ನನ್ನ ಗಂಡನ ಅಕ್ಕ ಹೇಮಲತಾ ಅವರ ವಿರುದ್ಧ ಅಖಿಲಾ ದೂರು ನೀಡಿದ್ದಾರೆ.

ಚಿನ್ನದ ಬ್ರಾಸ್ಲೇಟ್, ಚೈನ್, ಡೈಮೆಂಡ್ ಎಂಗೇಜ್ಮೆಂಟ್ ರಿಂಗ್, ಚಿನ್ನದ ಓಲೆ, ಜುಮುಕಿ, ಲಾಂಗ್ ನೆಕ್ಲೇಸ್, ಶಾರ್ಟ್ ನೆಕ್ಲೇಸ್, ಶಾರ್ಟ್ ಚೈನ್ ಪೆಂಡೆಂಟ್, ಚಿನ್ನದ ಉಂಗುರ, ಚಿನ್ನದ ಬಳೆ, ಡೈಮೆಂಡ್ ಉಂಗುರ ಎಲ್ಲ ಸೇರಿ 180 ಗ್ರಾಂ ತೂಕದ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಆಭರಣ, 9 ಲಕ್ಷ ರೂಪಾಯಿ ನಗದು ಹಣ ಕೊಟ್ಟು 30 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.
ಮದುವೆ ಬಳಿಕ 1.5 ಲಕ್ಷ ರೂಪಾಯಿ ಸೋಫಾ, ಟಿವಿ, ಮಿಕ್ಸರ್, ಗ್ರೈಂಡರ್, ಮೈಕ್ರೋ ಓವನ್, ಅಲೆಕ್ಸಾ, ವಾಷಿಂಗ್ ಮಷಿನ್ ಮುಂತಾದವುಗಳನ್ನು ತವರು ಮನೆಯವರು ಕೊಡಿಸಿದ್ದಾರೆ. ಪ್ರೀತಿ ಮಾಡುತ್ತಿದ್ದಾಗ ಗಂಡನಿಗೆ 221000 ರೂಪಾಯಿ ಮೌಲ್ಯದ ಜಾವಾ ಬೈಕ್, 10600 ರೂಪಾಯಿಯ ಮೊಬೈಲ್ ಫೋನ್ ಕೊಡಿಸಿದ್ದೇನೆ.
ಆರಂಭದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡರು, ಆಮೇಲೆ ಗಂಡನ ಅಕ್ಕ ಮನೆಗೆ ಬಂದು ಚಾಡಿ ಹೇಳಲು ಆರಂಭಿಸಿದರು. ಗಂಡನ ಸಿನಿಮಾಕ್ಕೆ ಹಣ ಬೇಕೆಂದು ಪೀಡಿಸಿದಾಗ ನನ್ನ ತವರು ಮನೆಯವರು ಸಾಲ ಮಾಡಿ 10 ಲಕ್ಷ ರೂ ನೀಡಿದರು. ಆಮೇಲೆ ಮತ್ತೆ ಒತ್ತಾಯ ಮಾಡಿದ್ದಕ್ಕೆ 76000 ರೂಪಾಯಿ ಮೊಬೈಲ್ ಫೋನ್ ಕೊಡಿಸಿದ್ದೆ. ಇದನ್ನು ನನ್ನ ತವರು ಮನೆಯವರಿಗೆ ತಿಳಿಸಿದಾಗ ರಾಜಿ ಪಂಚಾಯಿತಿ ಮಾಡಿದ್ದರು. ಈಗ 27-30 ಲಕ್ಷ ರೂಪಾಯಿ ಕಾರ್ ಕೊಡಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಡುತ್ತಿದ್ದಾರೆ.
ಪತ್ನಿಗೆ ಮಾನಸಿಕ ಸಮಸ್ಯೆ :

ಮಾನಸಿಕ ಸಮಸ್ಯೆಗೆ ಒಳಗಾಗಿರುವ ನನ್ನ ಪತ್ನಿ ನನ್ನ ಮೇಲೆ ಹಲ್ಲೆ ನಡೆಸಿ, ಆತ್ಮಹತ್ಯೆಗೆ ಯತ್ನಿಸಿ, ಸುಳ್ಳು ಅಪಪ್ರಚಾರ ಮಾಡುತ್ತಿದ್ದಾಳೆ. ನನ್ನ ಪತ್ನಿಯನ್ನು ಆಕೆಯ ಸಹೋದರರು ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಮಂಸೋರೆ ದೂರು ನೀಡಿದ್ದಾರೆ.
ಈಗಾಗಲೇ ನಾನು ಅಖಿಲಾಳಿಗೆ ಕೌನ್ಸೆಲಿಂಗ್ ಕೊಡಿಸಿದ್ದೆ. ವೈದ್ಯರು ಅಖಿಲಾಗೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಎಂದು ಹೇಳಿದ್ದರು. ಅಖಿಲಾ ತುಂಬ ಹಠಮಾರಿ, ನನ್ನ ತಾಯಿಗೆ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದರು, ನನ್ನ ಮೇಲೆ ನಿರಂತರ ಹಲ್ಲೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ನಾನು ಹಲ್ಲೆ ಮಾಡಲಿ ಎಂದು ಪ್ರಚೋದಿಸುತ್ತಿದ್ದರು. ಆಕೆಗೆ ತಿಳಿವಳಿಕೆ ನೀಡುವ ಎಲ್ಲ ಪ್ರಯತ್ನಗಳನ್ನು ನಾನು ಮಾಡಿದ್ದೇನೆ. ಸಾಕಷ್ಟು ಬಾರಿ ನನಗೆ ಹಲ್ಲೆ ಮಾಡಿದರೂ ಕೂಡ ನಾನು ಪ್ರತಿಕ್ರಿಯೆ ನೀಡಲಿಲ್ಲ. ಮದುವೆ ಆಗುವ ಸಮಯದಲ್ಲಾಗಲೀ, ಮದುವೆ ಬಳಿಕವಾಗಲೀ ನಾನು ಯಾವುದೇ ವರದಕ್ಷಿಣೆ ಪಡೆದುಕೊಂಡಿಲ್ಲ. ಪತ್ನಿ ಮನೆಯಿಂದ ಇಲ್ಲಿಯವರೆ ಹಣ, ಆಭರಣ, ವಾಹನ ಏನನ್ನೂ ಪಡೆದಿಲ್ಲ. ನನ್ನ ಅಕೌಂಟ್, ಇತರ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ. ನನ್ನ ಪತ್ನಿ ನನ್ನ ಮೇಲೆ ಹಲ್ಲೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿರುತ್ತಾಳೆ. ಇದರ ಸಾಕ್ಷಿ ಇದೆ. ನನ್ನ ಪತ್ನಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ.
ದೂರು ನೀಡುವ ಮುಂಚೆ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದ ದೃಶ್ಯ, ನನ್ನ ಹಾಗೂ ನನ್ನ ತಾಯಿಯ ವಿರುದ್ಧ ನಿಂದನೆ ಮಾಡಿದ, ಹಲ್ಲೆ ಮಾಡಿದ ವಿಡಿಯೋ ಸಾಕ್ಷಿಗಳಿವೆ. ಅವುಗಳನ್ನು ಅರ್ಜಿಯೊಟ್ಟಿಗೆ ನೀಡಿದ್ದೇನೆ” ಎಂದಿದ್ದಾರೆ. ಅಲ್ಲದೆ ”ತಾವು ತಮ್ಮ ಪತ್ನಿಗೆ ಕೊಡಿಸಿದ ಚಿನ್ನಾಭರಣದ ಜೊತೆಗೆ ತಮ್ಮ ಸಿನಿಮಾಕ್ಕೆ ಬಂದಿರುವ ರಾಷ್ಟ್ರಪ್ರಶಸ್ತಿ ಹಾಗೂ ಇತರೆ ಪದಕಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಪತ್ನಿಯ ವಿರುದ್ಧ ದೂರು ಸಲ್ಲಿಸುವ ಉದ್ದೇಶ ನನಗೆ ವೈಯಕ್ತಿಕವಾಗಿ ಇಲ್ಲ. ಆಕೆಯ ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಸಿಗಬೇಕೆಂಬುದು ನನ್ನ ಕಾಳಜಿ. ಆದರೆ, ನನ್ನ ಪತ್ನಿ ಸಲ್ಲಿಸಿರುವ ಸುಳ್ಳು ದೂರಗಳ ವಿರುದ್ಧ ನನಗೆ ರಕ್ಷಣೆ ಒದಗಿಸಿ” ಎಂದು ಮನವಿ ಮಾಡಿದ್ದಾರೆ.

