ಮುಂಬೈ: ವ್ಯಕ್ತಿಯೊಬ್ಬ ಡಬಲ್ ಮರ್ಡರ್ ಮಾಡಿ ನಂತರ ಅರಣ್ಯ ಪ್ರದೇಶದಲ್ಲಿರುವ ಕೊಳಚೆ ಗುಂಡಿಯಲ್ಲಿ ಅವಿತುಕೊಂಡಿದ್ದು, ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಕಿಶೋರ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ. ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿರುವ ಈತ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಬೋಯಿಸರ್ನ ಕೂಡನ್ ಎಂಬ ಕುಗ್ರಾಮದಲ್ಲಿ ಜೋಡಿ ಕೊಲೆ ಮಾಡಿದ್ದಾನೆ. ಇಬ್ಬರು ಹಿರಿಯ ನಾಗರಿಕರನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.
ಇಬ್ಬರ ಬರ್ಬರ ಕೊಲೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಈ ವೇಳೆ ಕಿಶೋರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು.

#WATCH | Palghar, Maharashtra: Police arrested the double-murder accused Kishor Kumar Mandal from a nearby mud pond. https://t.co/kL8xEDjd7h pic.twitter.com/TxBiwMOHWr— ANI (@ANI) March 1, 2024
ಆರೋಪಿ ಅರಣ್ಯ ಪ್ರದೇಶವೊಂದರ ಕೊಳಚೆ ಗುಂಡಿಯಲ್ಲಿ ಅಡಗಿ ಕುಳಿತಿರುವ ಮಾಹಿತಿ ಸಿಕ್ಕಿದೆ. ಅಂತೆಯೇ ಸ್ಥಳಕ್ಕೆ ತೆರಳಿ ಕೊಳಚೆಯಿಂದ ಆತನನ್ನು ಹಿಡಿದು ತಂದಿರುವುದಾಗಿ ಫಾಲ್ಗರ್ ಪೊಲೀಸರು ತಿಳಿಸಿದ್ದಾರೆ.