ಇಡುಕ್ಕಿ : ಕೇರಳ-ತಮಿಳುನಾಡು ಅರಣ್ಯದ ಗಡಿ ಭಾಗದಲ್ಲಿರುವ ಮಯಿಲಾದುಂಪರೈನಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ನಾಯಿ ಮತ್ತು ಹುಲಿ ಒಂದೇ ಗುಂಡಿಯಲ್ಲಿ ಸಿಲುಕಿದ ಘಟನೆ ಇದು.
ಆಶ್ಚರ್ಯವಾದರೂ ನಿಜ. ರಬ್ಬರ್ ತೋಟದಲ್ಲಿದ್ದ ಸುಮಾರು 9 ಅಡಿ ಆಳದ ಗುಂಡಿಯೊಂದರಲ್ಲಿ ಹುಲಿ ಮತ್ತು ನಾಯಿ ಸಿಲುಕಿತ್ತು.
ಸನ್ನಿ ಎಂಬುವವರಿಗೆ ಸೇರಿದ ರಬ್ಬರ್ ತೋಟ ಇದಾಗಿದ್ದು, ಅವರು ನಾಯಿ ಬೊಗಳುವುದನ್ನು ಕೇಳಿ ನೋಡಲು ಹೋಗಿದ್ದಾರೆ. ಆಗ ಅಲ್ಲಿದ್ದ ಹೊಂಡದಲ್ಲಿ ಹುಲಿ ನಾಯಿ ಎರಡೂ ಬಿದ್ದಿರುವುದು ಗೊತ್ತಾಗಿ, ಕೂಡಲೇ ಅರಣ್ಯ ಇಲಾಖೆಗೆ ತಿಳಿಸಿದರು.

ಬೆಳೆಗಳನ್ನು ರಕ್ಷಿಸಲು ತೋಟದಲ್ಲಿ ಹೊಂಡವನ್ನು ತೋಡಲಾಗಿತ್ತು. ಹುಲಿ ನಾಯಿಯನ್ನು ಬೆನ್ನಟ್ಟುವಾಗ ಹೊಂಡಕ್ಕೆ ಬಿದ್ದಿರಬಹುದು ಎಂದು ಊಹಿಸಲಾಗಿದೆ.
ವಿಚಿತ್ರ ಅಂದ್ರೆ, ತನ್ನ ಆಹಾರ ಪಕ್ಕದಲ್ಲೆ ಇದ್ದರೂ ಹುಲಿ ನಾಯಿಗೇನೂ ಮಾಡದೆ ಇರೋದು.
ಅರಣ್ಯಾಧಿಕಾರು ಕಾರ್ಯಾಚರಣೆಗಿಳಿದರು.ಪೆರಿಯಾರ್ ಹುಲಿ ರಕ್ಷಿತಾರಣ್ಯದ ವೈದ್ಯರು ಬಂದು ಅಧಿಕಾರಿಗಳ ಅನುಮತಿ ಪಡೆದು ಹುಲಿಗೆ ಅರವಳಿಕೆ ನೀಡಿದರು. ಬಳಿಕ ಅದನ್ನು ಸೆರೆಹಿಡಿದು ಪೆರಿಯಾರ್ ಹುಲಿ ರಕ್ಷಿತಾರಣ್ಯಕ್ಕೆ ಸಾಗಿಸಿದರು.
