ಗುಜರಾತ್ : ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ 242 ಪ್ರಯಾಣಿಕರು ಸಾವನ್ನಪ್ಪಿದ್ದು, ಒಬ್ಬ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಪಾರಾಗಿದ್ದಾನೆ.
ವಿಶ್ವಾಸ್ ಕುಮಾರ್ ರಮೇಶ್ ಬದುಕುಳಿದ ವ್ಯಕ್ತಿ.
ಭಾರತ ಮೂಲದವರಾದ ವಿಶ್ವಾಸ್ ಕುಮಾರ್ ರಮೇಶ್ ಬ್ರಿಟಿಷ್ ಪ್ರಜೆ. ಕುಟುಂಬವನ್ನು ನೋಡಲು ಅವರು ಗುಜರಾತ್ಗೆ ಬಂದಿದ್ದರು. ತಮ್ಮ ಸಹೋದರ ಅಜಯ್ ಕುಮಾರ್ ರಮೇಶ್ ಅವರೊಂದಿಗೆ ವಾಪಸ್ ಲಂಡನ್ಗೆ ತೆರಳುತ್ತಿದ್ದರು.
Advertisement. Scroll to continue reading.
ಎ 11 ಸೀಟ್ನಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದ ಅಜಯ್ ಅದೃಷ್ಟವಶಾತ್ ಪಾರಾಗಿದ್ದು, ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.