ಶ್ರೀಲಂಕಾದ ಅಶೋಕ ವಟಿಕದಲ್ಲಿ ಸೀತೆ ರಾಮನಿಗಾಗಿ ಕಾದು ಕುಳಿತ್ತಿದ್ದ ಕಲ್ಲು ಅಯೋಧ್ಯೆಗೆ
Published
0
ನವದೆಹಲಿ : ಸೀತಾ ಮಾತೆ ತಂಗಿದ್ದ ಶ್ರೀಲಂಕಾದ ಇಲಿಯಾದಲ್ಲಿನ ಅಶೋಕ ವಟಿಕದಲ್ಲಿನ ಕಲ್ಲನ್ನು ಭಾರತಕ್ಕೆ ತರಲಾಗುತ್ತಿದೆ. ಸೀತೆಯನ್ನು ರಾವಣ ಅಪಹರಿಸಿ, ಅಶೋಕ ವನದಲ್ಲಿ ಬಂಧನದಲ್ಲಿರಿಸಿದ್ದ. ರಾಮನ ಬರುವಿಕೆಗಾಗಿ ಸೀತೆ ಕಾದು ಕುಳಿತ್ತಿದ್ದಳು. ಈಗ ಸೀತೆ ಕಾದು ಕುಳಿತ್ತಿದ್ದ ಕಲ್ಲನ್ನು ಶ್ರೀಲಂಕಾದಿಂದ ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಭಾರತದಲ್ಲಿನ ಶ್ರೀಲಂಕಾ ಹೈಕಮಿಷನರ್ ಮಿಲಿಂದಾ ಮೊರಾಗೊಡಾ ಕಲ್ಲನ್ನು ಭಾರತಕ್ಕೆ ತರಲಿದ್ದು, ಆ ಕಲ್ಲನ್ನು ಅಯೋಧ್ಯೆ ರಾಮ ಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.